ಕಾರವಾರ:
ಜಿಲ್ಲೆಯಲ್ಲಿ ಕೃಷಿ ಕಾರ್ಯ ಚಟುವಟಿಕೆ ಮುಂದುವರಿದಿದ್ದು ಕೃಷಿ ಇಲಾಖೆಯ ಗುರಿಯಷ್ಟು ಸಾಧನೆ ಕಂಡಿಲ್ಲ. ಕೃಷಿ ಕ್ಷೇತ್ರಕ್ಕೆ ಸರಕಾರ ಸಾಕಷ್ಟು ಉತ್ತೇಜನ ನೀಡುತ್ತಿದೆ. ಆದರೂ ಎಲ್ಲೇ ಕೃಷಿಕರಲ್ಲೇ ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳುವ ಉತ್ಸಾಹ ಕಡಿಮೆಯಾಗಿದೆ. ಕಳೆದ ಕೆಲವು ವರ್ಷಗಳ ಹಿಂದೆ ಕೃಷಿ ಕ್ಷೇತ್ರದಲ್ಲಿ ಉತ್ತಮ ಬೆಳೆ ರೈತರು ಬೆಳೆಯುತ್ತಿದ್ದಾರೂ ಇತ್ತಿಚೇಗೆ ಅನೇಕರು ನಿರುತ್ಸಾಹಿಗಳಾಗಿದ್ದಾರೆ. ಇಲಾಖೆಯ ಪ್ರಕಾರ ಜಿಲ್ಲೆಯಲ್ಲಿ ಭತ್ತ, ಜೋಳ, ಶೇಂಗಾ, ಕಬ್ಬು, ಹತ್ತಿ ಬೆಳೆ ಸೇರಿ ಒಟ್ಟು 81,364 ಹೆಕ್ಟೆರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆಯಾಗಬೇಕಾಗಿತ್ತು. ಆದರೆ ಈವರೆಗೆ 39,161ಹೆಕ್ಟೆರ್ ಪ್ರದೇಶವಷ್ಟೇ ಕೃಷಿ ಬೆಳೆಗೆ ಬಳಕೆಯಾಗಿದೆ.ಜಿಲ್ಲೆಯಲ್ಲಿ ಕೃಷಿ ಕ್ಷೇತ್ರಗಳನ್ನು ಇನ್ನಷ್ಟು ಅಭಿವೃದ್ಧಿ ಪಡಿಸಬೇಕು ಎನ್ನುವ ದೃಷ್ಟಿಯಿಂದ ಹಲವಾರು ಯೋಜನೆಗಳನ್ನು ನೀಡುತ್ತಿದೆ. ಆದರೆ ಅಭಿವೃದ್ಧಿ ಕಾಣದ ದೃಷ್ಟಿಯಿಂದ ರೈತರ ತಮ್ಮ ಕೃಷಿ ಜಮೀನನ್ನು ಕೃಷಿ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳುತ್ತಿಲ್ಲ ಎಂದು ಅಂಥ ಜಮೀನುಗಳನ್ನು ಸರಕಾರದ ವಶಕ್ಕೆ ಪಡೆದುಕೊಳ್ಳುವಂಥ ಚಾಟಿ ಏಟು ನೀಡಲು ಸಹ ಪ್ರಸಕ್ತ ಸಾಲಿನಲ್ಲಿ ಮುಂದಾಗಿದ್ದು ಕೆಲವು ಸರಕಾರದ ನೀತಿಯಿಂದ ಆಕ್ಷೇಪಗಳು ಕೇಳಿಬಂದಿವೆ.ಈವರೆಗೆ ಜಿಲ್ಲೆಯಲ್ಲಿ ಒಟ್ಟೂ 67,405 ಹೆಕ್ಟೆರ್ ಪ್ರದೇಶದಲ್ಲಿ ಭತ್ತ ಬೆಳೆ ನಾಟಿಯಾಗಬೇಕಿತ್ತು. ಆದರೆ ಇನ್ನೂ 24024ಹೆಕ್ಟೆರ್ ಪ್ರದೇಶದಲ್ಲಿ ಮಾತ್ರ ನಾಟಿಯಾಗಿದೆ. ಅದರಂತೆ ಮು.ಜೋಳ, ಕಬ್ಬು ಬಿಟಿ ಹತ್ತಿಗಳು ಒಟ್ಟೂ 13960 ಹೆಕ್ಟೆರ್ ರಷ್ಟು ಸಾಧನೆಯಾಗಬೇಕಿತ್ತು. ಇಲ್ಲಿ ಉತ್ತಮ ಸಾಧನೆಯಾಗಿದ್ದು ಒಟ್ಟೂ 15137 ಹೆಕ್ಟೆರ್ ಸಾಧನೆಯನ್ನು ಜಿಲ್ಲೆಯ ರೈತರ ಮಾಡಿದ್ದಾರೆ. ಕೃಷಿ ಇಲಾಖೆಯ ಅಂಕಿ ಅಂಶಕ್ಕಿಂತ ಸುಮಾರು 1177ಹೆಕ್ಟೆರ್ರಷ್ಟು ಹೆಚ್ಚುವರಿಯಾಗಿ ಸಾಧನೆಯಾಗಿದೆ.
ಜಿಲ್ಲೆಯ ಆಯಾ ತಾಲೂಕಿನಲ್ಲಿ ಕೆಲವೇ ತಾಲೂಕು ಹೊರತು ಪಡಿಸಿ ಭತ್ತದ ನಾಟಿಯಲ್ಲಿ ಅರ್ಧದಷ್ಟು ಸಾಧನೆಯಾಗಿಲ್ಲ. ಈವರೆಗೆ ಕೇವಲ 24024 ಹೆಕ್ಟೆರ್ ಸಾಧನೆಯಾಗಿದ್ದು ಅಧಿಕ ಇಳುವರಿಗಾಗಿ ಇನ್ನಷ್ಟು ಹೆಚ್ಚು ಸಾಧನೆ ಮಾಡಲು ಕೃಷಿ ಇಲಾಖೆ ರೈತರಿಗೆ ಪ್ರೋತ್ಸಾಹ ನೀಡುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಅದರಂತೆ ಜಿಲ್ಲೆಯ ಕೆಲ ತಾಲೂಕಿನಲ್ಲಿ ಈ ಬಿತ್ತನೆ, ನಾಟಿಕ ಕಾರ್ಯ ಮುಂದುವರಿದಿದ್ದು ಸಾಧನೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಕೃಷಿ ಇಲಾಖೆಯದ್ದಾಗಿದೆ.
ಕಾರವಾರ-ಅಂಕೋಲಾ ತಾಲೂಕಿನಲ್ಲೇ ಅತೀ ಕಡಿಮೆ ಸಾಧನೆ ಕಳೆದ ಸಾಕಷ್ಟು ವರ್ಷಗಳಿಂದ ಆಗುತ್ತಿದೆ. ಈ ಬಾರಿ 2200 ಹೆಕ್ಟೆರ್ ಪ್ರದೇಶದಲ್ಲಿ ನಾಟಿಯಾಗಬೇಕಾಗಿದ್ದ ಭತ್ತ ಕೇವಲ 47 ಹೆಕ್ಟೇರ್ ಪ್ರದೇಶದಲ್ಲಷ್ಟೇ ಆಗಿದೆ. ಅದರಂತೆ ಅಂಕೋಲಾದಲ್ಲಿ 5900 ಗರಿಯಲ್ಲಿ 26 ಹೆಕ್ಟೇರ್ ಸಾಧನೆಯಾಗಿದೆ. ಕುಮಟಾದಲ್ಲಿ 5000 ಗುರಿ, ಸಾಧನೆ 561, ಹೊನ್ನಾವರ 3500ಗುರಿಯಲ್ಲಿ 450ರಷ್ಟು ಸಾಧನೆಯಾಗಿದೆ. ಭಟ್ಕಳದಲ್ಲಿ 3900ಗುರಿ, ಸಾಧನೆ 3310ಯಾಗಿದೆ. ಸಿದ್ದಾಪುರದಲ್ಲಿ 6200 ಗುರಿಯಲ್ಲಿ 745ರಷ್ಟು ಸಾಧನೆಯಾಗಿದೆ. ಅದರಂತೆ ಶಿರಸಿಯಲ್ಲಿ 9205ಗುರಿಯಲ್ಲಿ 3500 ಸಾಧನೆ, ಮುಂಡಗೋಡಿನಲ್ಲಿ 11000ಗುರಿಯಲ್ಲಿ 6790ಸಾಧನೆಯಾಗಿದೆ. ಯಲ್ಲಾಪುರದಲ್ಲಿ 4500ಗುರಿಯಲ್ಲಿ 360ರಷ್ಟು ಸಾಧನೆ ಕಂಡಿದೆ. ಹಳಿಯಾಳದಲ್ಲಿ 11000 ಗುರಿಯಲ್ಲಿ 8235 ಸಾಧನೆ, ಜೊಯಿಡಾದಲ್ಲಿ 5000 ಹೆಕ್ಟೇರ್ ಪ್ರದೇಶದ ಗುರಿಯನ್ನು ಕೃಷಿ ಇಲಾಖೆ ಹೊಂದಿದ್ದು ಬಿತ್ತನೆ, ನಾಟಿ ಕಾರ್ಯ ಇನ್ನು ಆರಂಭಗೊಂಡಿಲ್ಲ. ಜಿಲ್ಲೆಯಲ್ಲಿ ಒಟ್ಟೂ 67,405 ಹೆಕ್ಟೇರ್ ಗುರಿ ಇಲಾಖೆ ಹೊಂದಿದ್ದು ಇನ್ನೂ 24024ರಷ್ಟೇ ಸಾಧನೆಯಾಗಿದೆ.
ಜಿಲ್ಲೆಯಲ್ಲಿ ಜೋಳ, ಶೇಂಗಾ, ಕಬ್ಬು ಹಾಗೂ ಬಿಟಿ ಹತ್ತಿ ಬೆಳೆಗಳನ್ನು ಬೆಳೆಯಲು ರೈತರು ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ. ಇದರಿಂದಾಗಿ ಕೃಷಿ ಇಲಾಖೆಯ ಗುರಿಗಿಂತ ಹೆಚ್ಚಿನ ಸಾಧನೆ ಜಿಲ್ಲೆಯಲ್ಲಾಗಿದೆ. ಕಾರವಾರ ತಾಲೂಕಿನಲ್ಲಿ 15 ಹೆಕ್ಟೆರ್ ಗುರಿ ಇಲಾಖೆ ಹೊಂದಿದೆ. ಅದರಲ್ಲಿ 10ಹೆಕ್ಟೆರ್ ಸಾಧನೆಯಾಗಿದೆ. ಅದರಂತೆ ಅಂಕೋಲಾದಲ್ಲಿ 55 ಗುರಿ, 23 ಹೆಕ್ಟೆರ್ ಸಾಧನೆಯಾಗಿದೆ. ಕುಮಟಾದಲ್ಲಿ 100ರಲ್ಲಿ 82ರಷ್ಟು ಸಾಧನೆ ಕಂಡಿದೆ. ಹೊನ್ನಾವರದಲ್ಲಿ 235ರಲ್ಲಿ ಕೇವಲ 24ರಷ್ಟು ಸಾಧನೆಯಾಗಿದೆ. ಭಟ್ಕಳದಲ್ಲಿ 115ರಲ್ಲಿ ಕೇವಲ 18ರಷ್ಟು ಮಾತ್ರ ಸಾಧನೆಯಾಗಿದೆ. ಸಿದ್ದಾಪುರದಲ್ಲಿ ಗುರಿ 50, ಸಾಧನೆ 68, ಶಿರಸಿ 440 ಗುರಿ, ಸಾಧನೆ 642, ಮುಂಡಗೋಡ 2600 ಗುರಿ, ಸಾಧನೆ 2360, ಯಲ್ಲಾಪುರ ಗುರಿ 700 ಸಾಧನೆ 280, ಹಳಿಯಾಳ ಗುರಿ 9500, ಸಾಧನೆ 11480 ಹಾಗೂ ಜೊಯಿಡಾ ತಾಲೂಕಿನಲ್ಲಿ 150ಗುರಿಯನ್ನು ಪೂರ್ಣಗೊಳಿಸಿಕೊಂಡಿದೆ.
ಭತ್ತ ಸೇರಿಂದತೆ ಇನ್ನಿತರ ಬೆಳೆಗಳು ಜಿಲ್ಲೆಯಲ್ಲಿ ಒಟ್ಟೂ 81,365 ಹೆಕ್ಟೆರ್ಗಳಲ್ಲಿ ಒಟ್ಟೂ 39,161ರಷ್ಟು ಸಾಧನೆಯಾಗಿದ್ದು ಒಟ್ಟೂ ಶೇ.48.13ರಷ್ಟು ಸಾಧನೆಯಾಗಿದೆ. ಕಾರವಾರ 2215ಗುರಿ 57ರಷ್ಟು ಸಾಧನೆ(ಶೇ.2.57), ಅಂಕೋಲಾ 5955ಗುರಿ, ಸಾಧನೆ49(ಶೇ.0.82), ಕುಮಟಾ 5100ರಲ್ಲಿ 643 (ಶೇ12.61), ಹೊನ್ನಾವರ 3735ರಲ್ಲಿ 474 (ಶೇ.12.69), ಭಟ್ಕಳ 4015ರಲ್ಲಿ 3328(ಶೇ.82.89), ಸಿದ್ದಾಪುರ 6250ರಲ್ಲಿ 813(ಶೇ.13.01), ಶಿರಸಿ 9645ರಲ್ಲಿ 4142(ಶೇ.42.94), ಮುಂಡಗೋಡ 13600ರಲ್ಲಿ 9150(ಶೇ.67.28), ಯಲ್ಲಾಪುರ 5200ರಲ್ಲಿ 640(ಶೇ.12.31), ಹಳಿಯಾಳ 20,500ರಲ್ಲಿ 19,715 (ಶೇ.96.17), ಜೊಯಿಡಾದಲ್ಲಿ 5150ರಲ್ಲಿ 150(ಶೇ.2.91) ರಷ್ಟು ಸಾಧನೆಯಾಗಿದೆ. ಜೊಯಿಡಾದಲ್ಲಿ ಕೃಷಿ ಚಟುವಟಿಕೆ ಕಾರ್ಯ ಮುಂದುವರಿದಿದೆ.
ಕಳೆದ ಅನೇಕ ವರ್ಷಗಳಿಂದ ಕೃಷಿ ಜಮೀನನ್ನು ಕೃಷಿ ಚಟುವಟಿಕೆಗೆ ಬಳಸದೆ ಬಂಜರು ಮಾಡಿರುವ ಭೂಮಿಯನ್ನು ರೈತರು ಶೀಘ್ರವೇ ಕೃಷಿ ಕಾರ್ಯಗಳನ್ನು ನಡೆಸುವಂತೆ ಸರ್ಕಾರ ನೋಟಿಸ್ ನೀಡಿದೆ. ಕೃಷಿ ಚಟುವಟಿಕೆ ನಡೆಯದ ಭೂಮಿಯನ್ನು ಸರ್ಕಾರ ವಶಕ್ಕೆ ಪಡೆಯುವ ವದಂತಿ ಎಲ್ಲಡೆ ಹರಡಿದೆ. ಕೃಷಿಗೆ ಬಳಸಿಕೊಳ್ಳದ ಕೃಷಿ ಭೂಮಿಯನ್ನು ಪತ್ತೆ ಹಚ್ಚಿ ಸಂಬಂಧಪಟ್ಟವರಿಗೆ ನೋಟಿಸು ನೀಡುವ ಕೆಲಸ ಮುಂದುವರೆದಿದೆ.
Leave a Comment