ಹಳಿಯಾಳ :
ವಿದ್ಯಾರ್ಥಿಗಳು ತಮ್ಮ ಶಾಲಾ ಜೀವನದಲ್ಲಿ ಪಠ್ಯೇದೊಂದಿಗೆ ಎನ್ಸಿಸಿ , ಸ್ಕೌಟ್ಸ್ ಮತ್ತು ಗೈಡ್ಸ್ ದಂತಹ ಕ್ರೀಯಾತ್ಮಕ ಚಟುವಟಿಕೆ, ಶಿಬಿರಗಳಲ್ಲಿ ಪಾಲ್ಗೊಂಡು ಶಿಸ್ತುಬದ್ದ ಜೀವನ ರೂಪಿಸಿಕೊಳ್ಳಬೇಕು ಎಂದು ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಲಕ್ಷ್ಮಣ್ರಾವ್ ಯಕ್ಕುಂಡಿ ನುಡಿದರು.
ಶನಿವಾರ ನಗರದ ಕ್ರೀಡಾಭವನದಲ್ಲಿ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಶಿಕ್ಷಕರಿಗೆ ನಡೆದ ಭಾರತ್ಸ್ಕೌಟ್ಸ್ ಮತ್ತು ಗೈಡ್ಸ್ನ ಪುನಶ್ಚೇತನ ಶಿಬಿರವನ್ನು ಜ್ಯೋತಿ ಬೆಳಗಿಸಿ ಮತ್ತು ಸ್ಕೌಟ್ಸ್ ಸಂಸ್ಥಾಪಕ ಬೆಡನ್ ಪೆವೆಲ್ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು,
ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ್ ಮುಲ್ಲಾ ಮಾತನಾಡಿ, ತಾಲೂಕಿನಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರು ಕ್ರೀಯಾಶೀಲರಾಗಿ ಕಾರ್ಯನಿರ್ವಹಿಸಬೇಕು. ಆಗ ಮಾತ್ರ ಶಾಲೆಗಳಲ್ಲಿ ಮತ್ತು ಮಕ್ಕಳಲ್ಲಿ ಶಿಸ್ತನ್ನು ಕಾಣಲು ಸಾಧ್ಯ. ಆದ್ದರಿಂದ ತಾಲೂಕಿನಲ್ಲಿ ತರಬೇತಿ ಪಡೆದ ಎಲ್ಲ ಶಿಕ್ಷಕರು ತಮ್ಮ ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ದಳ ಪ್ರಾರಂಭಿಸಬೇಕೆಂದರು.
ಸ್ಕೌಟ್ಸ್ ಮತ್ತು ಗೈಡ್ಸ್ನ ಶಿರಸಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾ ಸಂಘಟಕ ವೀರೇಶ ಮಾದರ, ತಾಲೂಕಾ ಕಾರ್ಯದರ್ಶಿ ವಾಯ್ ಜಿ ಕುರಿ, ಪರೀಕ್ಷಾ ಆಯುಕ್ತೆ ರಾಧಾರಾಣಿ ಮತ್ತು ತಾಲೂಕಾಘಟಕದ ಉಪಾಧ್ಯಕ್ಷೆ ಸುರೇಖಾ ನಾಯ್ಕ, ಲಿನೆಟಾ ಶೇರಾವೊ ಮತ್ತು ಸಿದ್ದಪ್ಪಾ ಬಿರಾದಾರ ಇತರರು ಇದ್ದರು.
Leave a Comment