ಕಾರವಾರ:
ನೂತನವಾಗಿ ಸ್ಥಾಪಿಸಲಾದ ಕೋಮಾರಪಂಥ ಸಮಾಜ ಸಂಘವನ್ನು ಅಮದಳ್ಳಿಯ ಶ್ರೀ ವೀರಗಣಪತಿ ಸಭಾಭವನದಲ್ಲಿ ಕ್ಷೇತ್ರ ಪುರೋಹಿತ ಪಾಂಡುರಂಗ ಜೋಶಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಶೈಕ್ಷಣಿಕ ಸ್ವಾವಲಂಬನೆ ಮೂಲಕ ಸಮಾಜದ ಎಲ್ಲರೂ ಮುಖ್ಯವಾಹಿನಿಗೆ ಬರಬೇಕು ಎಂದು ಕರೆ ನೀಡಿದರು. ತಾ.ಪಂ ಅಧ್ಯಕ್ಷೆ ಪ್ರಮೀಳಾ ನಾಯ್ಕ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ, ನಗರಸಭಾ ಅಧ್ಯಕ್ಷ ಗಣಪತಿ ನಾಯ್ಕ, ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಇನ್ನಿತರರು ಮಾತನಾಡಿದರು. ಹಿರಿಯ ನಾಗರಿಕರಾದ ದಿನಕರ ದೇವರ್ಸಾ ನಾಯ್ಕರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ನಾಮದೇವ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ವೀರ ಗಣಪತಿ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಜಿ.ಕೆ ಶಿವಪ್ರಸಾದ, ಪ್ರಮುಖರಾದ ಆರ್.ಎಸ್.ನಾಯ್ಕ, ಶ್ರೀಧರ ಮೇತ್ರಿ, ಸುರೇಂದ್ರ ನಾಯ್ಕ, ಉದಯ ಡೊಂಗಾ ನಾಯ್ಕ, ಗಜೇಂದ್ರ ನಾಯ್ಕ, ದಿನಕರ ಎಲ್ ನಾಯ್ಕ, ಎನ್.ಸಿ ನಾಯ್ಕ, ಪ್ರಕಾಶ ಪಿ ನಾಯ್ಕ, ರವಿ ಯು ನಾಯ್ಕ, ಮೋಹನ ನಾಯ್ಕ, ಚಂದ್ರು ನಾಯ್ಕ ಮಾಲಗಾರ, ದಾಮೋದರ ನಾಯ್ಕ, ಚಂದ್ರಕಾಂತ ನಾಯ್ಕ ಉಪಸ್ಥಿತರಿದ್ದರು.
Leave a Comment