ಕಾರವಾರ:
ಸಿದ್ದರದ ಮಲ್ಲಿಕಾರ್ಜುನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಮಂಗಳವಾರ ನಡೆದ ವಿದ್ಯಾರ್ಥಿ ಸಂಸತ್ ಚುನಾವಣೆಯಲ್ಲಿ ಪ್ರತಿನಿಧಿಗಳ ಆಯ್ಕೆ ನಡೆಯಿತು.
ಪ್ರಧಾನ ಕಾರ್ಯದರ್ಶಿಯಾಗಿ ರೂಪಾ ಒಡೆಯರ ಚುನಾಯಿತರಾದರು. ಶಿವಾನಿ ಪೂಜಾರಿ ಕ್ರಿಡಾ ಕಾರ್ಯದರ್ಶಿಯಾಗಿ, ಅಂಮ್ರಿತಾ ಕೊಲಂಬಕರ ಸಾಂಸ್ಕøತಿಕ ಕಾರ್ಯದರ್ಶಿಯಾಗಿ, ಪ್ರಭಾತ ರಾಣೆ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯದರ್ಶಿಯಾಗಿ, ನಿಲೇಶ ಚಿಪ್ಕರ ಪ್ರವಾಸ ಕಾರ್ಯದರ್ಶಿಯಾಗಿ ಚುನಾಯಿತರಾದರು.
ಸಾಝಿಯಾ ಶೇಖರನ್ನು ಮಹಿಳಾ ಪ್ರತಿನಿಧಿಯಾಗಿ ಆರಿಸಲಾಯಿತು. ಪಲ್ಲವಿ ಪಿ. ನಾಯ್ಕ ದ್ವಿತೀಯ ಪಿ.ಯು ವರ್ಗ ಪ್ರತಿನಿದಿಯಾಗಿ ಹಾಗೂ ಸಚಿನ ಎಸ್. ರಾಣೆ ಪ್ರಥಮ ಪಿ.ಯು. ವರ್ಗ ಪ್ರತಿನಿಧಿಯಾಗಿ ಆಯ್ಕೆಯಾದರು. ಸಮಾಜಶಾಸ್ತ್ರದ ಉಪನ್ಯಾಸಕ ಡಿ.ಆರ್ ನಾಯ್ಕ ಚುನಾವಣೆ ಉಸ್ತುವಾರಿ ವಹಿಸಿದ್ದರು.
Leave a Comment