* ಚಿನ್ನದ ಉಳಿತಾಯ ಯೋಜನೆಯಾದ *TSS ಸಮೃದ್ದಿ* – TSS ಚಿನ್ನದ ಮಳಿಗೆಯಲ್ಲಿ ಪ್ರಾರಂಭವಾಗಿದ್ದು, ಚಿನ್ನದ ಮೇಲೆ ಪ್ರತೀ ತಿಂಗಳೂ ಹಣವನ್ನು ತೊಡಗಿಸಬಹುದಾಗಿದೆ.
* ಅಡಿಕೆದರದಲ್ಲಿ ಸಧ್ಯಕ್ಕೆ ಯಾವುದೇ ದೊಡ್ಡ ಏರಿಕೆಯ ಲಕ್ಷಣ ಕಾಣದೇ, ಬಹುತೇಕ ಚಿಕ್ಕ ಪುಟ್ಟ ಏರಿಳಿತದ ನಡುವೆ ಇದೇ ದರ ಮುಂದಿನ ವಾರವೂ ಮುಂದುವರಿಯುವ ನಿರೀಕ್ಷೆ ಇದೆ.
* ಬರುವ ವಾರ ಕೂಡ ಸಾಧಾರಣ ಮಳೆ ಮುಂದುವರೆಯುವ ಮುನ್ಸೂಚನೆ ಇದೆ.
* ವಾತಾವರಣದ ವೈಪರೀತ್ಯದಲ್ಲಿ ರೈತರ ಮಹಸೂಲನ್ನು ರಕ್ಷಿಸುವ ಗುರುತರ ಜವಾಬ್ದಾರಿಯನ್ನು ಸೂಕ್ತವಾಗಿ ನಾವು ನಿರ್ವಹಿಸುತ್ತಿದ್ದಾಗಿಯೂ ಸಹ ಸದಸ್ಯರು ತಮ್ಮ ತಮ್ಮ ಮಹಸೂಲನ್ನು ಸಂಘದ ಕೆಲಸದ ವೇಳೆಯಲ್ಲಿ ಯಾವಾಗ ಬೇಕಾದರೂ ಪರೀಕ್ಷಿಸಿಕೊಳ್ಳಲು ನಮ್ಮ ಸಿಬ್ಬಂದಿಗಳು ಸಹಾಯಕ್ಕೆ ಬರುತ್ತಾರೆ ಎಂದು ತಿಳಿಸುತ್ತಿದ್ದೇವೆ.
* ಇನ್ನು ಮುಂದೆ *ಮೊಬೈಲ್ ಫೊನುಗಳೂ ಸಹಿತ ಸುಪರ್ ಮಾರ್ಕೆಟನಲ್ಲಿ* ದೊರೆಯುತ್ತಿದ್ದು, ಸಧ್ಯಕ್ಕೆ ಸ್ಯಾಮಸಂಗ್ ಹಾಗು ಮೈಕ್ರೊಮ್ಯಾಕ್ಸ ಕಂಪೆನಿಗಳ ಮೊಬೈಲ್ ಗಳು ಸ್ಪರ್ಧಾತ್ಮಕ ಬೆಲೆಗೆ ದೊರಕುತ್ತಿದೆ.
* ನಾಡಿದ್ದು ಸೊಮವಾರ ನಾಡಿನಾದ್ಯಂತ ರಕ್ಷಾಬಂಧನವನ್ನು ಆಚರಿಸಲಾಗುತ್ತಿದ್ದು ಅದರ ಶುಭಾಷಯವನ್ನು ತಿಳಿಸುವುದರ ಜೊತೆ ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಸಲುವಾಗಿ *ಎಂದಿನಂತೆ ಅಡಿಕೆ ವ್ಯಾಪಾರವನ್ನು ಸಹ ಮಾಡಲಾಗುತ್ತಿದೆ.*
TSS Sirsi
05-08-2017
Leave a Comment