ಕಾರವಾರ: ಆಗಸ್ಟ 10 ರಂದು “ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ” ಆಚರಿಸಲಾಗುತ್ತಿದೆ.
1-19 ವರ್ಷದೊಳಗಿನ ಶಾಲೆಯಲ್ಲಿ ಕಲಿಯುತ್ತಿರುವ ಎಲ್ಲಾ ಮಕ್ಕಳಿಗೂ ಶಾಲಾ ಕಾಲೇಜುಗಳಲ್ಲಿ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಲ್ಲಿ ಅಲ್ಬೆಂಡೊಜಾಲ್ ಮಾತ್ರೆ ಊಟದ ತರುವಾಯೆ ಸೇವನೆಯ ಬಗ್ಗೆ ವ್ಯವಸ್ಥೆ ಮಾಡಲಾಗಿದೆ. ಪಾಲಕರು ತಮ್ಮ ಮಕ್ಕಳು ಮಾತ್ರೆಗಳನ್ನು ಸೇವಿಸಿರುವ ಬಗ್ಗೆ ಖಚಿತಪಡಿಸಿಕೊಂಡು ಮಕ್ಕಳಲ್ಲಿ ಕಂಡು ಬರುವ ಜಂತುಹುಳು ಬಾಧೆ ನಿವಾರಣೆಯಲ್ಲಿ ಸಹಕಾರ ನೀಡಬೇಕಾಗಿ ಜಿಲ್ಲಾ ಆರೋಗ್ಯ ಮತ್ತು ಕು.ಕ. ಅಧಿಕಾರಿ ಡಾ. ಜಿ.ಎನ್. ಅಶೋಕ ಕುಮಾರ ವಿನಂತಿಸಿದ್ದಾರೆ.
Leave a Comment