ಹೊನ್ನಾವರ ತಾಲೂಕಿನ ಹೆರಂಗಡಿ ಪಂಚಾಯತ್ ವ್ಯಾಪ್ತಿಯ ಅಳ್ಳಂಕಿಯಲ್ಲಿ ವೇಗದೂತ ಬಸ್ಗಳ ನಿಲುಗಡೆಗೆ ಆಗ್ರಹಿಸಿ ಅಳ್ಳಂಕಿ ಜಯ ಕರ್ನಾಟಕ ಗ್ರಾಮೀಣ ಘಟಕದಿಂದ ಕುಮಟಾ ವಿಭಾಗದ ಡಿಪೋಗೆ ತೆರಳಿ ಮನವಿ ಸಲ್ಲಿಸಿದರು.
ಅಳ್ಳಂಕಿಯಲ್ಲಿ 500ಕ್ಕೂ ಹೆಚ್ಚು ಮನೆಗಳಿದ್ದು ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ವಿಕಾಸ ಗ್ರಾಮೀಣ ಬ್ಯಾಂಕ್, ಪ್ರಾಥಮಿಕ ಆರೋಗ್ಯ ಕೇಂದ್ರ ಇನ್ನಿತರ ಕಚೇರಿಗಳಿದ್ದು ಇಲ್ಲಿಂದ ದಿನ ನಿತ್ಯ ನೂರಾರು ಪ್ರಯಾಣಿಕರು ದೂರದ ಸ್ಥಳಗಳಿಗೆ, ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಬೇರೆ ಬೇರೆ ಸ್ಥಳಗಳಿಗೆ ಪ್ರಯಾಣಿಸುತ್ತಾರೆ. ಆದರೆ ಇಲ್ಲಿ ವೇಗದೂತ ಬಸ್ಗಳನ್ನು ನಿಲ್ಲಿಸದಿರುವುದರಿಂದ ಇಲ್ಲಿಂದ ಪ್ರಯಾಣಿಸುವ ಜೊತೆಗೆ ದೂರದ ಸ್ಥಳಗಳಿಂದ ಬಂದಿಳಿಯುವ ಪ್ರಯಾಣಿಕರಿಗೆ ತೀರಾ ತೊದರೆಯಾಗುತ್ತಿದೆ, ಈ ಮೋದಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಗ್ರಾಮ ಸಭೆ ಜನ ಸ್ಪಂಧನ ಸಭೆಗಳಲ್ಲಿ ಈ ಕುರಿತು ಮನವಿ ನೀಡಿದಾಗ ನಿಲುಗಡೆಯ ಬರವಸೆ ನೀಡಿತ್ತಾದರೂ ಈ ವರೆಗೆ ಯಾವುದೇ ಪ್ರಯೋಜನವಾಗದೇ ಇರುವ ಕಾರಣ ಜಯ ಕರ್ನಾಟಕ ಸಂಘಟನೆ ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಸಂಘಟನೆಯ ಮುಂದಾಳತ್ವದಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಂದ ಬೃಹತ್ ಪ್ರತಿಭಟನಾ ಎಚ್ಚರಿಕೆಯನ್ನು ನೀಡಿದರು. ಮನವಿಯನ್ನು ಸ್ವೀಕರಿಸದ ಸಾರಿಗೆ ಅಧಿಕಾರಿಗಳು ಸಕಾರಾತ್ಮಕ ಸ್ಪಂದನೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಳ್ಳಂಕಿ ಗ್ರಾಮೀಣ ಘಟಕದ ಅಧ್ಯಕ್ಷರಾದ ಪ್ರಮೋದ ಜಿ. ನಾಯ್ಕ, ಕಾರ್ಯದರ್ಶಿಯಾದ ಗಣೇಶ ಜಿ. ಹಳ್ಳೇರ್, ಸಂಘಟನಾ ಕಾರ್ಯದರ್ಶಿಯಾದ ಮಾದೇವ ಟಿ. ನಾಯ್ಕ, ರಾಜೇಂದ್ರ ನಾಯ್ಕ, ಸುಧಾಕರ ನಾಯ್ಕ, ರೋನಾಲ್ಡ ಡಾಯಸ್, ಭರತ್ ನಾಯ್ಕ, ಗುರು ಪ್ರಸಾದ ಗೌಡ, ಮುಂತಾದ ಸದಸ್ಯರು ಉಪಸ್ಥತಿತರಿದ್ದರು.
Leave a Comment