ಕಾರವಾರ: ತಾಯಿಗೆ ಪೋಷಣೆ ಹಾಗೂ ಸಂರಕ್ಷಣೆ ವೆಚ್ಚ ನೀಡದ ಇಬ್ಬರು ಮಕ್ಕಳ ಮೇಲೆ ಉಪವಿಭಾಗೀಯ ದಂಡಾಧಿಕಾರಿಗಳ ನ್ಯಾಯಾಲಯವು ಬಂಧನದ ವಾರಂಟ್ ಜಾರಿ ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸಲ್ಲಿಸಿದೆ.
ನಗರದ ಕೆಎಚ್ಬಿ ಕಾಲೋನಿಯ ಸಫುರಾಜೀ ಖಾನ್ ಎಂಬುವವರ 6 ಮಂದಿ ಪುತ್ರರಲ್ಲಿ ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಫಜಲ್ ಖಾನ್ ಹಾಗೂ ಶಬ್ಬೀರ್ ಖಾನ್ ಹೆಸರಿನಲ್ಲಿ ವಾರಂಟ್ ಜಾರಿಯಾಗಿದೆ.
ತಮ್ಮ ಜೀವನ ನಿರ್ವಹಣೆ ನೋಡಿಕೊಳ್ಳುವ ವೆಚ್ಚ ನೀಡದೇ ಮಕ್ಕಳು ನಿರ್ಲಕ್ಷಿಸಿದ್ದಾರೆ ಎಂದು ಸಫುರಾಜೀ ಖಾನ್ ಇವರಿಬ್ಬರ ಮೇಲೆ ಈ ಹಿಂದೆ ಹಿರಿಯ ನಾಗರಿಕರ ಸಹಾಯವಾಣಿಗೆ ದೂರು ಸಲ್ಲಿಸಿದ್ದರು.
2016ರ ಡಿ.20ರಂದು ಪ್ರಕರಣವನ್ನು ವಿಚಾರಣೆ ನಡೆಸಿದ ಉಪವಿಭಾಗೀಯ ದಂಡಾಧಿಕಾರಿ ಶಿವಾನಂದ ಕರಾಳೆ ಮಾಸಿಕ ತಲಾ 5ಸಾವಿರ ಪೋಷಣೆ ಹಾಗೂ ಸಂರಕ್ಷಣಾ ವೆಚ್ಚ ನೀಡಬೇಕು ಎಂದು ಆದೇಶಿಸಿದ್ದರು. ಆದರೆ ಅದನ್ನು ಪಾಲಿಸದ ಹಿನ್ನಲೆಯಲ್ಲಿ ಅವರು ಈ ತೀರ್ಪು ನೀಡಿದ್ದಾರೆ.
Leave a Comment