• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಪಟ್ಟಣದ ಕೆನರಾ ಬ್ಯಾಂಕ-ದೇಶಪಾಂಡೆ ಆರ್‍ಸೆಟಿಯ ವಾರ್ಷಿಕ ವರದಿ ಬಿಡುಗಡೆ

August 11, 2017 by Sachin Hegde Leave a Comment

ಹಳಿಯಾಳ:

ಜಗತ್ತು ತಾಂತ್ರಿಕತೆಯೆಡೆಗೆ ವಾಲುತ್ತಿದ್ದು ತಂತ್ರಾಂಶ ಅಭಿವೃದ್ದಿಯಿಂದ ಜಗತ್ತಿನ ವಿದ್ಯಮಾನಗಳು ಅಂಗೈಯಲ್ಲಿ ದೊರೆಯುತ್ತಿರುವುದರಿಂದ ಬದಲಾವಣೆಗಳನ್ನು ಪ್ರತಿಯೊಬ್ಬರು ಸ್ವೀಕರಿಸಬೇಕು ಹಾಗೂ ಪ್ರಾಥಮಿಕ ಹಂತದಿಂದಲೇ ತಾಂತ್ರಿಕ ಶಿಕ್ಷಣ ನೀಡುವಲ್ಲಿ ಸರ್ಕಾರಗಳು ಮಹತ್ವದ ದಾಪುಗಾಲು ಇಡಬೇಕಾಗಿದೆ ಎಂದು ಮಣಿಪಾಲ ಗ್ಲೋಬಲ್ ಎಜುಕೇಶನ್ ಸರ್ವಿಸಸ್‍ನ ಆಧ್ಯಕ್ಷ ಟಿ.ವಿ.ಮೋಹನದಾಸ ಪೈ ಅಭಿಪ್ರಾಯಪಟ್ಟರು.
ಅವರು ಗುರುವಾರ ಹಳಿಯಾಳ ಪಟ್ಟಣದ ಕೆನರಾ ಬ್ಯಾಂಕ-ದೇಶಪಾಂಡೆ ಆರ್‍ಸೆಟಿಯ ವಾರ್ಷಿಕ ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವರದಿ ಬಿಡುಗಡೆ ಮಾಡಿ ಮಾತನಾಡುತ್ತಾ ವಿಶ್ವದಲ್ಲಿ ತಾಂತ್ರಿಕ ಅಬಿವೃದ್ದಿ ದಿನೇ ದಿನೇ ಕ್ಷಿಪ್ರಗತಿಯಲ್ಲಿ ಆಗುತ್ತಿದ್ದು ಅದರೊಂದಿಗೆ ನಾವು ಕೂಡ ಹೆಜ್ಜೆ ಇಡಬೇಕು ಪ್ರತಿಯೊಬ್ಬರು ತಮ್ಮಲ್ಲಿರುವ ಪ್ರತಿಭೆಯನ್ನು ಉಪಯೋಗಿಸಿ ದೇಶದಕ್ಕೆ ಕೊಡುಗೆ ನೀಡಬೇಕೆಂದು ಕರೆ ನೀಡಿದರು.
ಸಚಿವ ದೇಶಪಾಂಡೆರವರ ಅವಿರತ ಆಸಕ್ತಿ ಹಾಗೂ ಪ್ರಯತ್ನದಿಂದ ಇಂದು ಹಳಿಯಾಳ ತಾಲೂಕು ಹಾಗು ಸುತ್ತಮುತ್ತಲಿನ ಗ್ರಾಮಗಳು ಸಾಕಷ್ಟು ಪ್ರಗತಿ ಕಂಡಿರುವುದು ಸಚಿವರು ಇನ್ನೂ ಹೆಚ್ಚಿನ ಅಭಿವೃದ್ದಿ ಮಾಡಲಿ ಎಂದು ಪೈ ಹಾರೈಸಿದರು.
ಸಂಸ್ಥೆಯ ಅರ್ಧವಾರ್ಷಿಕ ವಾರ್ತಾಪತ್ರಿಕೆ ‘ಕೌಶಲ್ಯ’ದ ಅನಾವರಣ ಮಾಡಿದ ಮೈಸೂರಿನ ವಿವೇಕಾನಂದ ಸಂಸ್ಥೆಯ ಸಂಸ್ಥಾಪಕ ಡಾ.ರಾಮಸ್ವಾಮಿ ಬಾಲಸುಬ್ರಹ್ಮಣ್ಯ ಮಾತನಾಡಿ ಹಳಿಯಾಳ ದೇಶಪಾಂಡೆ ಆರ್‍ಸೆಟಿಯ ಗ್ರಾಮೀಣಾಭಿವೃದ್ದಿ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಯುವಕರು ಇಂತಹ ಸಂಸ್ಥೆಗಳು ನಡೆಸುವ ಶಿಬಿರಗಳ ಪ್ರಯೋಜನ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಂತರೆ ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೆಕರ “ಜಲ ಸಂಜೀವಿನಿ” ಕಾರ್ಯಕ್ರಮದ ವರದಿ ಬಿಡುಗಡೆಗೊಳಿಸಿ ಮಾತನಾಡಿ ಆರ್.ಸೆಟಿ ಸಂಸ್ಥೆಯಿಂದ ಲಕ್ಷಾಂತರ ಯುವಕರು ಉಚಿತ ತರಬೇತಿ ಪಡೆದು ಸ್ವಾಲವಂಬಿಯಾಗಿ ಜೀವನ ನಡೆಸಡುತ್ತಿರುವುದು ಹೆಮ್ಮೆಯ ಸಂಗತಿ ಎಂದ ಅವರು ರಾಜ್ಯ ಕಾಂಗ್ರೇಸ್ ಸರ್ಕಾರ ಬಡವರು, ದಿನದಲಿತರ ಅಭಿವೃಧ್ದಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು ಅದರ ಸದುಪಯೋಗ ಪಡೆದು ಜೀವನದಲ್ಲಿ ಪ್ರಗತಿ ಹೊಂದುವಂತೆ ಯುವ ಸಮೂಹಕ್ಕೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ ತಮ್ಮ ತಂದೆರವರ ಹೆಸರಿನಲ್ಲಿದ್ದ ವಿ.ಆರ್.ದೇಶಪಾಂಡೆ ಸ್ಮಾರಕ ಟ್ರಸ್ಟನಿಂದ ಆರ್‍ಸೆಟಿಯೊಂದಿಗೆ ಇತರ ಕೆಲವು ಶೈಕ್ಷಣಿಕ ಸಂಸ್ಥೆಗಳು ಯಶಸ್ವಿಯಾಗಿ ನಡೆಸಲಾಗುತ್ತಿದ್ದು ಆರೋಗ್ಯ ಶಿಬಿರಗಳು ಕೂಡ ನಡೆಯುತ್ತಿದ್ದು ಇನ್ನೂ ಹೆಚ್ಚಿನ ಜನಪರ ಕಾರ್ಯಕ್ರಮಗಳು ಸಂಸ್ಥೆಯಿಂದ ನಡೆಯಲಿದ್ದು ಎಲ್ಲರ ಸಹಕಾರ ಅಗತ್ಯವೆಂದರು.
ಕಾರ್ಯಕ್ರಮದಲ್ಲಿ ಟಾಟಾ ಮೋಟರ್ಸರವರೊಂದಿಗೆ ದಾಂಡೇಲಿಯಲ್ಲಿ ವಾಹನ ಚಾಲನೆಯ ತರಬೇತಿ ಶಾಲೆ ಸ್ಥಾಪನೆಗಾಗಿ ಒಡಂಬಡಿಕೆಯ ದಾಖಲಾತಿಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಕೆನರಾ ಬ್ಯಾಂಕ ಮಂಗಳೂರಿನ ಜನರಲ್ ಮ್ಯಾನೆಜರ ಜಿಎಸ್ ಹುಲಿಕಟ್ಟಿ 5 ಸ್ವಸಹಯ ಗುಂಪುಗಳನ್ನು ಸನ್ಮಾನಿಸಿದರು. ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಸಾಧೆನೆಗೈದ ವಿದ್ಯಾರ್ಥಿಗಳನ್ನು ಹಾಗೂ ಕೆಲವು ಸಾಧಕರನ್ನು ಗಣ್ಯರು ಗೌರವಿಸಿ ಸತ್ಕರಿಸಿದರು.
ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಸಾದ ದೇಶಪಾಂಡೆ ಅವರು 3 ವರ್ಷಗಳವರೆಗೆ ಸಂಸ್ಥೆಯ ನಿರ್ದೇಶಕರಾಗಿ ಈಗ ವರ್ಗಾವಣೆಗೊಂಡಿರುವ ನಿರ್ದೇಶಕ ರವೀಂದ್ರ ರೇವಣಕರ ಹಾಗೂ ಅವರ ಸ್ಥಾನಕ್ಕೆ ಆಗಮಿಸಿರುವ ನೂತನ ನಿರ್ದೇಶಕ ನಿತ್ಯಾನಂದ ವೈದ್ಯರನ್ನು ಸನ್ಮಾನಿಸಿದರು. ವಿಆರ್.ಡಿಎಮ್ ಟ್ರಸ್ಟ್‍ನ ಧರ್ಮದರ್ಶಿ ಪ್ರಸಾದ ಆರ್ ದೇಶಪಾಂಡೆ ಸ್ವಾಗತಿಸಿದರು. ನಿರ್ದೇಶಕ ರವೀಂದ್ರ ರೇವಣಕರ ವಂದಿಸಿದರು.

watermarked 11 hly 2

 

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News Tagged With: ಅಭಿವೃದ್ದಿ, ಅರ್ಧವಾರ್ಷಿಕ, ಆರ್‍ಸೆಟಿಯ, ಕೆನರಾ, ಕೌಶಲ್ಯ, ಚಾಲನೆ, ಜಗತ್ತು, ಜಲ, ತಂತ್ರಾಂಶ, ತಾಂತ್ರಿಕತೆ, ದಾಂಡೇಲಿಯಲ್ಲಿ, ದೇಶಪಾಂಡೆ, ಪಟ್ಟಣದ, ಬಿಡುಗಡೆ, ಬ್ಯಾಂಕ, ವರದಿ, ವಾರ್ತಾಪತ್ರಿಕೆ, ವಾರ್ಷಿಕ, ವಾಹನ, ಸಂಜೀವಿನಿ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...