ಹೊನ್ನಾವರ : ಇಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಅತ್ಯತ್ತಮ ಕಾರ್ಯ ನಿರ್ವಹಿಸಿ, ವಿದ್ಯಾರ್ಥಿಗಳ, ಶಿಕ್ಷಕರ, ವಿದ್ಯಾಭಿಮಾನಿಗಳ ಮನಸ್ಸನ್ನು ಜಯಿಸಿದ.ಜಿ.ಎಸ್.ಭಟ್ಟ ಇವರನ್ನು ಅಭಿಮಾನ ಹಾಗೂ ಗೌರವಪೂರ್ವಕವಾಗಿ ಮಾರ್ ಥೋಮಾ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು. ಮೆನೆಜರ ರೆ|| ಜಾನ್ ಉಮ್ಮನ್ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ ಶುಭಾಶಯ ಕೋರಿದರು. ಖಜಾಂಚಿಯವರಾದ ಕೆ.ಸಿ.ವರ್ಗೀಸ ಸ್ವಾಗತಿಸಿ ಮಾಲಾರ್ಪಣೆ ಮಾಡಿದರು. ಶೈಕ್ಷಣಿಕ ನಿರ್ದೇಶಕ ಎಚ್. ಎನ್.ಪೈ ಅಧಿಕಾರ ಬಿಟ್ಟು ತೆರಳುವ ಸಂದರ್ಭದಲ್ಲಿ ಸತ್ಕರಿಸುವುದು ಅವರ ಉತ್ತಮ ಕಾರ್ಯಕ್ಕೆ, ಸಜ್ಜನಿಕೆಗಾಗಿ ಎಂದು ತಿಳಿಸುತ್ತಾ ಅಭಿನಂದನಾಪರ ಮಾತುಗಳನ್ನಾಡಿ ಫಲ ತಾಂಬೂಲ ನೀಡಿದರು.
ಸನ್ಮಾನ ಸ್ವೀಕರಿಸಿ ಜಿ.ಎಸ್.ಭಟ್ಟ ಮಾತನಾಡಿ ತಾನು ತುಳಿದ ಹಾದಿ ವಿವರಿಸಿ ಸಂಸ್ಥೆಯ ನಡುವಿನ ಸ್ನೇಹದ ಕ್ಷಣಗಳನ್ನು ಸ್ಮರಿಸುತ್ತಾ ಕೃತಜ್ಞತೆ ಸಲ್ಲಿಸಿದರು. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಎಸ್.ವೈ.ಬೈಲೂರ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು. ಮಾರ್ ಥೋಮಾ ಸಂಸ್ಥೆಯ ಹೊನ್ನಾವರ ತಾಲೂಕಿನ ಎಲ್ಲ ವಿದ್ಯಾಲಯಗಳ ಮುಖ್ಯಾಧ್ಯಾಪಕರು, ಪ್ರಾಚಾರ್ಯರು ಉಪಸ್ಥಿತರಿದ್ದರು.
Leave a Comment