ಹೊನ್ನಾವರ; ಕರ್ನಾಟಕರಾಜ್ಯ ಖಾಸಗಿ ಶಿಕ್ಷಣಸಂಸ್ಥೆಗಳ ಮತ್ತು ನೌಕರರ ಒಕ್ಕೂಟದ ಹೊನ್ನಾವರ ತಾಲೂಕಿನ ಪದಾಧಿಕಾರಿಗಳು 20 ಕ್ಕೂ ಹೆಚ್ಚು ಬೇಡಿಕೆಗಳ ಇತ್ಯರ್ಥಕ್ಕೆಆಗ್ರಹಿಸಿ ಒಕ್ಕೂಟದ ಗೌರವಾಧ್ಯಕ್ಷ ಕೃಷ್ಣಮೂರ್ತಿ ಹೆಬ್ಬಾರ ನೇತೃತ್ವದಲ್ಲಿ ಸರಕಾರಕ್ಕೆ ತಹಸೀಲ್ದಾರರ ಮೂಲಕ ಮನವಿ ಸಲ್ಲಿಸಿದರು
.ಕಳೆದ ಶೈಕ್ಷಣಿಕ ವರ್ಷದಲ್ಲಿ ವಿವಿಧ ಹಂತದ ಪ್ರತಿಭಟನೆ ಮಾಡಿದಾಗ್ಯೂ ಸರ್ಕಾರ ಸ್ಪಂದಿಸದೇ ಇರುವ ಕಾರಣ ಅನಿವಾರ್ಯವಾಗಿ ಪುನಃ ಪ್ರತಿಭಟನೆಗೆ ಇಳಿಯಬೇಕಾಯಿತು ಎಂದು ಕೃಷ್ಣಮೂರ್ತಿ ಹೆಬ್ಬಾರ ಹೇಳಿದರು
ಖಾಲಿ ಹುದ್ದೆ ನೇಮಕಾತಿ , ನೌಕರರ ಪಿಂಚಣಿ, ವಿದ್ಯಾರ್ಥಿ ಮತ್ತು ಶಿಕ್ಷಕರ ಅನುಪಾತ , ಮತ್ತು ಮಾನ್ಯತೆ ನವೀಕರಣದಂತಹ 20 ಕ್ಕೂ ಹೆಚ್ಚು ಜ್ವಲಂತ ಸಮಸ್ಯೆಗಳಿಗೆ ಶೀಘ್ರ ಪರಿಹಾರ ನೀಡಬೇಕು ಎಂದು ಮನವಿ ¸ಸಲ್ಲಿಸಲಾಯಿತು
ಸಮಸ್ಯೆಗೆ ಸರ್ಕಾರ ಸ್ಪಂದಿಸದೇ ಇದ್ದಲ್ಲಿ ಮುಂಬರುವ ದಿನಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಬಂದ್ ಮಾಡಿ ಪ್ರತಿಭಟಿಸುವದೆಂದು ಎಚ್ಚರಿಸಲಾಯಿತು,
ಪದಾಧಿಕಾರಿಗಳಾದ ಮನೋಹರ ನಾಯ್ಕ, ಕೆ.ಆರ್. ಭಟ್ಟ, ವಿ. ಎಸ್. ಅವಧಾನಿ, ಮಹೇಶ ಶೆಟ್ಟಿ,.ಪಿ.ಜಿ.ಲಿಂಗೋಜಿ, ಅಡ್ವಿನ ಡಯಾಸ, ಶ್ರೀಕಾಂತ ಹಿಟ್ನಳ್ಳಿ ಆಡಳಿತ ಮಂಡಳಿಯವರಾದ ರಘು ಪೈ , ಮಹೇಶ ಹೆಗಡೆ ಉಪಸ್ಥಿತರಿದ್ದರು
Leave a Comment