ಕಾರವಾರ:
ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಹಲವಾರು ವರ್ಷಗಳಿಂದ ಬಾಕಿ ಉಳಿದಿದ್ದ ಪ್ರಕರಣಗಳನ್ನು ಇತ್ಯರ್ಥಪಡಿಸುವನಿಟ್ಟಿನಲ್ಲಿ ಶನಿವಾರ ಆಯೊಜಿಸಿದ್ದ ಲೋಕ ಅದಾಲತ್ನಲ್ಲಿ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 330 ಪ್ರಕರಣಗಳು ಇತ್ಯರ್ಥಗೊಂಡಿವೆ.
ಕೆಲವು ಸಣ್ಣಪುಟ್ಟ ವ್ಯಾಜ್ಯಗಳು, ವೈಯಕ್ತಿಕ ಕಾರಣಗಳಿಂದ ನ್ಯಾಯಾಲಯದ ಮೆಟ್ಟಿಲೇರಿದ ಪ್ರಕರಣಗಳನ್ನು ರಾಜಿ ಸಂದಾನಗಳ ಮೂಲಕ ಇತ್ಯರ್ಥಪಡಿಸಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಲೋಕ ಅದಾಲತ್ ಮುಂದಾಗಿದೆ. ಅದರಂತೆ ಜಿಲ್ಲೆಯ ಸಿವಿಲ್ ನ್ಯಾಯಾಲಯದಲ್ಲಿ ಲೋಕ ಅದಾಲತ್ಗೆ 532 ಪ್ರಕರಣಗಳು ಬಂದಿದ್ದವು. ಆಮೀನು ವ್ಯಾಜ್ಯ, ಕೌಟುಂಬಿಕ ಕಲಹ, ಭೂಸ್ವಾಧೀನ, ರಸ್ತೆ ಅಪಘಾತ ಪ್ರಕರಣಗಳು ಸೇರಿದ್ದವು. ಇವುಗಳನ್ನು ಜಿಲ್ಲೆಯ 11 ತಾಲೂಕುಗಳಲ್ಲಿಯೂ ನಡೆಸಿ ಲೋಕ ಅದಾಲತ್ನಲ್ಲಿ 330 ಪ್ರಕರಣಗಳು ಇತ್ಯರ್ಥವಾಗಿದೆ.
ಅದರಲ್ಲಿ ಕಾರವಾರದಲ್ಲಿ 17, ಅಂಕೋಲಾದಲ್ಲಿ 31, ಕುಮಟಾದಲ್ಲಿ41, ಹೊನ್ನಾವರದಲ್ಲಿ 68,ದಾಂಡೇಲಿಯಲ್ಲಿ 19, ಭಟ್ಕಳದಲ್ಲಿ40, ಸಿದ್ದಾಪುರದಲ್ಲಿ 43, ಶಿರಸಿಯಲ್ಲಿ21, ಹಳಿಯಾಳದಲ್ಲಿ 38, ಯಲ್ಲಾಪುರದಲ್ಲಿ 4, ಮುಂಡಗೋಡಿನಲ್ಲಿ 8 ಪ್ರಕರಣಗಳು ಇತ್ಯರ್ಥವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಟಿ. ಗೋವಿಂದಯ್ಯ ತಿಳಿಸಿದ್ದಾರೆ.
Leave a Comment