ಹೊನ್ನಾವರ: ಉತ್ತರ ಕನ್ನಡ ಜಿಲ್ಲಾ ದಿ. ಡಿ.ದೇವರಾಜ ಅರಸು ವಿಚಾರ ವೇದಿಕೆ ಹೊನ್ನಾವರ ಇವರ ಆಶ್ರಯದಲ್ಲಿ ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸುರವರ ಜನ್ಮ ದಿನಾಚರಣೆಯ ಅಂಗವಾಗಿ ತಾಲೂಕು ಆಸ್ಪತ್ರೆಯ ಒಳರೋಗಿಗಳಿಗೆ ಹಾಲು, ಬ್ರೆಡ್ಡು, ಹಣ್ಣು ವಿತರಣೆ ಮಾಡಲಾಯಿತು.
ವೇದಿಕೆ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ ಮಾತನಾಡಿ, ಕಳೆದ 20 ವರ್ಷಗಳಿಂದ ಪ್ರತಿವರ್ಷ ದೇವರಾಜ ಅರಸು ಅವರ ಜನ್ಮ ದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಅರಸು ಅವರ ವಿಚಾರಧಾರೆ ಸಮಾಜಕ್ಕೆ ದಾರಿದೀಪವಾಗಿದೆ ಎಂದರು.
ಜಿಲ್ಲಾ ಪಂಚಾಯತ ಸದಸ್ಯ ದೀಪಕ ಜಿ. ನಾಯ್ಕ ಮಂಕಿ, ಅಕ್ಷಯ ಬ್ಯಾಂಕ್ ಅಧ್ಯಕ್ಷ ಲುಕಾಸ್ ಫರ್ನಾಂಡೀಸ್, ಗುತ್ತಿಗೆದಾರರ ಸಂಘದ ಅಧ್ಯಕ್ಷ ರಾಮಪ್ಪ ನಾಯ್ಕ, ತಾ. ಪಂ. ಸದಸ್ಯ ಆರ್.ಪಿ. ನಾಯ್ಕ ಚಿಕ್ಕನಕೋಡ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಆಸ್ಪತ್ರೆಯ ವೈಧ್ಯಾದಿಕಾರಿ ಡಾ. ರಾಜೇಶ ಕಿಣಿ, ವೇದಿಕೆಯ ಸದಸ್ಯರಾದ ಎಂ.ಡಿ.ಗೌಡ ಆರೋಳ್ಳಿ , ಐ.ವಿ.ನಾಯ್ಕ ನಗರೆ, ದೀಪಕ ಲೋಬೊ ಕೊಡಾಣಿ, ಕೇಶವ ನಾಯ್ಕ ಮಾಗೋಡ ಎಂ.ಜಿ.ನಾಯ್ಕ ನಗರೆ, ಯಾಹ್ಯಾ ಖಾನ್ ಕೊಡ್ಲಗದ್ದೆ, ರಮೇಶ ಮರಾಠಿ ತಲಗೋಡ, ಪಾಂಡುರಂಗ ಬಾಗಿಲ ವೈದ್ಯ, ದೇವೇಂದ್ರ ನಾಯ್ಕ, ಹರೀಶ ನಾಯ್ಕ, ಎಂ.ಜಿ.ನಾಯ್ಕ ಉಪ್ಪೋಣಿ, ಸಿ.ಬಿ.ನಾಯ್ಕ ಹೊನ್ನಾವರ ಇವರು ಉಪಸ್ಥಿತರಿದ್ದರು.
Leave a Comment