ಹೊನ್ನಾವರ; ತಾಲೂಕಿನ ಮುಗ್ವಾಗ್ರಾಮಪಂಚಾಯತ ವ್ಯಾಪ್ತಿಯ ಬಾಳೆಗದ್ದೆಯಲ್ಲಿ ಉಜ್ವಲ ಯೋಜನೆಯಡಿ ಫಲಾನುಭವಿಗಳಿಗೆ ಉಚಿತಗ್ಯಾಸಕಿಟ್ ವಿತರಣಾP Áರ್ಯಕ್ರಮ ನಡೆಯಿತು
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಪಂಚಾಯತ ಸದಸ್ಯೆ ಶ್ರೀಕಲಾ ಶಾಸ್ತ್ರಿಯವರು ಮಾತನಾಡಿ ಉಜ್ವಲ ಯೋಜನೆಇದೊಂದುಕೇಂದ್ರ ಸರಕಾರದಜನಪರಯೋಜನೆಯಾಗಿದ್ದು ಈ ಯೋಜನೆಯನ್ನು ಫಲಾನುಭವಿಗಳ ಮನೆಬಾಗಿಲಿಗೆ ತಲುಪಿಸಿಅನುಕೂಲತೆಯನ್ನು ಒದಗಿಸುವ ನಿಟ್ಟಿನಲ್ಲಿ ಬಿಜೆಪಿ ಪ್ರಮುಖರಾದ ನಾಗರಾಜ ನಾಯಕತೊರ್ಕೆಯವರು ಶ್ರಮಿಸುತ್ತಿದ್ದುಅವರ ನೆರವಿನಿಂದಫಲಾನುಭವಿಗಳು ಸುಲಭವಾಗಿ ಮನೆ ಬಾಗಿಲಲ್ಲೆಈ ಯೋಜನೆಯಫಲ ಪಡೆದುಕೊಳ್ಳುವಂತಾಗಿದ್ದು ಇದಕ್ಕೆ ಸಹಕರಿಸಿದ ನಾಗರಾಜ ನಾಯಕತೊರ್ಕೆಯವರಕಾರ್ಯಅಭಿನಂದನೀಯ ಎಂದರು.
ಮುಖಂಡ ವೆಂಕಟ್ರಮಣ ಹೆಗಡೆ ಮಾತನಾಡಿ ಮುಂದಿನ ದಿನಗಳಲ್ಲಿ ಎಲ್ಲಾಕಾರ್ಯಕರ್ತರೂ ಹೆಚ್ಚಿನ ಮುತುವರ್ಜಿ ಹಾಗೂ ಶ್ರಮ ವಹಿಸಿ ಈ ಯೋಜನೆಯನ್ನುಅನುಷ್ಠಾನಗೊಳಿಸುವಲ್ಲಿ ದುಡಿಯಬೇಕುಎಂದರು.
ಕಾರ್ಯಕ್ರಮದಅದ್ಯಕ್ಷತೆ ವಹಿಸಿದ ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ ಅಧ್ಯಕ್ಷರು ಹಾಗೂ ಬಿಜೆಪಿ ಪ್ರಮುಖರೂಆದ ನಾಗರಾಜ ನಾಯಕತೊರ್ಕೆ ಮಾತನಾಡಿ ತಾಯಂದಿರ ಸ್ವಾಸ್ಥ್ಯ ಹಾಗೂ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿಕೇಂದ್ರಸರಕಾರ ಈ ಯೋಜನೆಯನ್ನು ಜಾರಿಗೊಳಿಸಿದೆ.ಕಡುಬಡವರಿಗೆ ಈ ಯೋಜನೆಯಡಿ ಸಿಗುವ ಅನುಕೂಲತೆಯನ್ನುಅವರ ಮನೆಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಈಗಾಗಲೇ ಬಿಜೆಪಿ ಕಾರ್ಯಕರ್ತರುದುಡಿಯುತ್ತಿದ್ದು ಫಲಾನುಭವಿಗಳು ಹಣ, ಸಮಯ ವ್ಯಯಿಸದೇ, ಅಲೆದಾಟವಿಲ್ಲದೇಯೋಜನೆಯಅನುಕೂಲತೆಯನ್ನು ಪಡೆದುಕೊಳ್ಳುವಂತಾಗಿದೆ ಎಂದುಕಾರ್ಯಕರ್ತರ ಹಾಗೂ ಈ ಕಾರ್ಯಕ್ರಮದ ಅನುಷ್ಠಾನದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿದ ನಾರಾಯಣ ಹೆಗಡೆಯವರಕಾರ್ಯವನ್ನು ಶ್ಲಾಘಿಸಿದರು. ಮುಂದಿನ ದಿನಗಳಲ್ಲೂ ಕೇಂದ್ರಸರಕಾರದ ಹಲವು ಜನಪರ ಯೋಜನೆಗಳ ಕುರಿತು ಮಾಹಿತಿ ನೀಡುವುದರೊಂದಿಗೆ ಫಲಾನುಭವಿಗಳು ಸುಲಭವಾಗಿ ಪ್ರಯೋಜನ ಪಡೆದುಕೊಳ್ಳುವಂತೆ ಮಾಡಿ ಆ ಎಲ್ಲಾ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ಬರುವಂತೆ ಶ್ರಮಿಸಬೇಕುಎಂದು ಈ ಯೋಜನೆಯಡಿ ಫಲಾನುಭವಿಗಳಿಗೆ 6ಲಕ್ಷ ರೂ.ವಿಮೆ ಸೌಲಭ್ಯಇರುವುದಾಗಿ ಮಾಹಿತಿ ನೀಡಿದರು.
ಗೌರಿಗೌಡ, ಸುಬ್ಬಿಗೌಡ,ರಾಧಾನಾಯ್ಕ,ದುರ್ಗಿನಾಯ್ಕ, ಮಾದೇವಿಗೌಡ, ಸರಿತಾಗೌಡ, ಲಕ್ಷ್ಮೀಗೌಡ, ದೇವಿಮುಕ್ರಿ, ಮುಕ್ತನಾಯ್ಕ, ಮಂಕಾಳಿನಾಯ್ಕ ಮುಂತಾದ ಫಲಾನುಭವಿಗಳು ಉಚಿತಗ್ಯಾಸ್ ಸಂಪರ್ಕ ಪಡೆದುಕೊಂಡುತಮ್ಮ ಸಂತಸ ವ್ಯಕ್ತ ಪಡೆಸಿದರು.
ಈ ಸಂಧರ್ಬದಲ್ಲಿ ರಾಜೇಶ ಭಂಡಾರಿ, ವೆಂಕಟ್ರಮಣಹೆಗಡೆ, ಶಕ್ತಿಕೇಂದ್ರದಅಧ್ಯಕ್ಷರಾದ ನಾರಾಯಣ ಹೆಗಡೆ, ಟಿ.ಎಸ್.ಹೆಗಡೆ, ಸುರೇಶ ಶೆಟ್ಟಿ, ವಿನೋದ ನಾಯ್ಕ, ಮಂಜು ನಾಯ್ಕ, ನಾಗೇಶ ನಾಯ್ಕ, ಸುಭಾಷಗೌಡ , ಉಪಸ್ಥಿತರಿದ್ದರು. ಎಮ್.ಎಸ್.ಹೆಗಡೆಕಾರ್ಯಕ್ರಮ ನಿರೂಪಿಸಿದರು.
Leave a Comment