ಹೊನ್ನಾವರ;
“ಗ್ರಾಮೀಣ ಕ್ರೀಡಾ ಪ್ರತಿಭೆಗಳು ಬೆಳಗಲು ದಸರಾ ಕ್ರೀಡಾಕೂಟಗಳು ಅತ್ಯುತ್ತಮ ವೇದಿಕೆಯಾಗಿದೆ. ಅತ್ಯಂತ ಅಚ್ಚುಕಟ್ಟಾಗಿ ಶಿಸ್ತಿನಿಂದ ಸಂಘಟಿತವಾದ ಹೊನ್ನಾವರ ತಾಲೂಕಾ ದಸರಾ ಕ್ರೀಡಾಕೂಟದಲ್ಲಿ ಬೆಳಗಿದ ಗ್ರಾಮೀಣ ಕ್ರೀಡಾ ಪ್ರತಿಭೆಗಳು ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಬೆಳಗಲಿ.”
ಹೊನ್ನಾವರ ತಾಲೂಕಾ ಪಂಚಾಯತದ ಅಧ್ಯಕ್ಷ ಉಲ್ಲಾಸ ನಾಯ್ಕ ರವರು ದಸರಾ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿ ವಿದ್ಯುಕ್ತ ಚಾಲನೆ ನೀಡಿ ಈ ಮೇಲಿನಂತೆ ನುಡಿದರು.
ದಸರಾ ಕ್ರೀಡಾಕೂಟದ ವೇದಿಕೆಯ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದ ಜಿಲ್ಲಾ ಪಂಚಾಯತ ಸದಸ್ಯ ಸವಿತಾ ಕೃಷ್ಣ ಗೌಡರು ಮಾತನಾಡಿ ಯುವ ಜನರ ಸುಪ್ತ ಪ್ರತಿಭೆಗಳು ಬೆಳಕಿಗೆ ಬರಲು ಹೊನ್ನಾವರದ ಈ ಕ್ರೀಡಾಕೂಟ ಕಾರಣವಾಗಲಿ ಎಂದು ರು
ವೇದಿಕೆಯಲ್ಲಿ ಮುಖ್ಯ ಅಥಿತಿಗಳಾಗಿ ಪಾಲ್ಗೊಂಡ ತಾಲೂಕಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ ಮಾತನಾಡಿ ಯುವ ಶಿಕ್ಷಿತ ಕ್ರೀಡಾಕೂಟಗಳು ಸಮಾಜದಲ್ಲಿ ನಾಯಕತ್ವ ಹೊಂದಲು ಸಾಧ್ಯ. ಆ ಕ್ರಿಯೆಗೆ ಈ ಕ್ರೀಡಾಕೂಟ ಕಾರಣವಾಗಲಿ ಎಂದು ರು
ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ À ಕೃಷ್ಣ ಜೆ. ಗೌಡ, ತಾ||ಪಂ|| ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಂ.ವಿ. ಹೆಗಡೆ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಸುರೇಶ ಜಿ. ನಾಯ್ಕ, ಹೊನ್ನಾವರ ತಾಲೂಕಾ ದೈಹಿಕ ಶಿಕ್ಷಣಾಧಿಕಾರಿಗಳಾದ À ಎಸ್.ಎನ್. ಗೌಡ, ತಾಲೂಕಾ ಯುವ ಒಕ್ಕೂಟದ ಅಧ್ಯಕ್ಷರಾದ ವಿನಾಯಕ ನಾಯ್ಕ ಮೂಡ್ಕಣಿ, ಸಂತ ಅಂತೋನಿ ಪ್ರೌಢಶಾಲಾ ಮುಖ್ಯಸ್ಥ ಅಶೋಕ ಜೋಸೆಫ್, ಮಹೇಶ ಶೆಟ್ಟಿ, ಸಾಧನಾಬರ್ಗಿ, ಎಂ.ಜಿ. ನಾಯ್ಕ, ಆನಂದು ಮಾಸ್ತಿಕಟ್ಟೆ ಇವರು ಉಪಸ್ಥಿತರಿದ್ದರು.
ತಾಲೂಕಾ ಯುವಜನ ಸೇವೆ ಹಾಗೂ ಕ್ರೀಡಾಧಿಕಾರಿಗಳಾದ ಸುಧೀಶ ನಾಯ್ಕ ಸರ್ವರನ್ನು ಸ್ವಾಗತಿಸಿದರು. ಪ್ರಾ.ಶಾ.ಶಿ. ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಎಂ.ಜಿ. ನಾಯ್ಕ ವಂದಿಸಿದರು. ಆರ್.ಬಿ. ಶೆಟ್ಟಿ ಶಿಕ್ಷಕರು ಕಾರ್ಯಕ್ರಮ ನಿರೂಪಿಸಿದರು. ಸುಮಾರು 200 ಕ್ಕೂ ಹೆಚ್ಚು ಕ್ರೀಡಾ ಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
Leave a Comment