ಹೊನ್ನಾವರ;
ತಾಲೂಕಿನ ಸರಳಗಿ ಗ್ರಾಮದ ಕೃಷ್ಣಪ್ಪ ಜಟ್ಟಿ ನಾಯ್ಕ ಇವರು ಕಿಡ್ನಿ ವೈಫಲ್ಯದ ಕಾರಣ ನಗರದ ಸೆಂಟ್ ಇಗ್ನೇಸಿಯಸ್ ಆಸ್ಪತ್ರೆಯಲ್ಲಿ ಡಾಯಲ್ಸಿಸ್ ಚಿಕಿತ್ಸೆಗೆ ಒಳಗಾಗಿದ್ದು ಹೊನ್ನಾವರ ಲಾಯನ್ಸ್ ಕ್ಲಬ್ ಸದಸ್ಯರಿಂದ ಸಂಗ್ರಹಿಸಿದ ದೇಣಿಗೆ ಮೊತ್ತ ರೂ. 11,600/- ಲಾಯನ್ಸ್ ಕ್ಲಬ್ ಅಧ್ಯಕ್ಷರಾದ ದೇವಿದಾಸ ಮಡಿವಾಳ ಇವರು ಸದಸ್ಯರ ಸಂಗಡ ಆಸ್ಪತ್ರೆಯ ಡಾಯಲಸಿಸ್ ಕೇಂದ್ರಕ್ಕೆ ತೆರಳಿ ಚಿಕಿತ್ಸೆಗೆ ಆರ್ಥಿಕ ನೆರವನ್ನು ರೋಗಿಗೆ ನೀಡಿದರು.
ಆ ಸಂದರ್ಭದಲ್ಲಿ ಖಜಾಂಚಿ ಲಾಯನ್ ಎಮ್ ವ್ಹಿ. ನಾಯ್ಕ, ಲಾಯನ್ಸ್ ಸದಸ್ಯರಾದ ಲಾಯನ್ ಕೃಷ್ಣಮೂರ್ತಿ ಭಟ್ಟ, ಲಾಯನ್ ಆರ್.ಡಿ.ನಾಯ್ಕ, ಲಾಯನ್ ಶೇಖರ ನಾಯ್ಕ, ಲಾಯನ್ ರಾಜೇಶ ಸಾಳೇಹಿತ್ತಲ್, ಲಾಯನ್ ವಿ.ಡಿ. ಶ್ಯಾನಭಾಗ, ಆಸ್ಪತ್ರೆಯ ವೈದ್ಯರಾದ ಡಾ|| ಆಶಿಕ್ ಹೆಗಡೆ ಮತ್ತು ಆಡಳಿತಾಧಿಕಾರಿ ಲಾಯನ್ ಹೆರಿಕ್ ಫರ್ನಾಂಡಿಸ್ ಉಪಸ್ಥಿತರಿದ್ದರು.
Leave a Comment