ಕಾರವಾರ:
ಭಟ್ಕಳದಲ್ಲಿ ಬಕ್ರಿದ್ ಹಬ್ಬಕ್ಕೆ ಅನಧಿಕೃತವಾಗಿ ಕಡೆಯಲು ತಂದಿರುವ ಗೋವುಗಳನ್ನು ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿ ಯೋಗಿ ಬ್ರಿಗೇಡನ ಕಾರ್ಯಕರ್ತರು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ಗೆ ಮನವಿ ಸಲ್ಲಿಸಿದರು.
ಸೆ. 2 ರಂದು ನಡೆಯಲಿರುವ ಬಕ್ರೀದ್ ಹಬ್ಬಕ್ಕೆ ಭಟ್ಕಳದ ವಿವಿಧ ಭಾಗಗಳಲ್ಲಿ ಸಾಕಷ್ಟು ಗೋವುಗಳನ್ನು ಅಕ್ರಮವಾಗಿ ಸಂಗ್ರಹಿಸಿಡಲಾಗಿದೆ. ಭಟ್ಕಳದ ನವಾಯತ್ ಕಾಲೋನಿಯ ರಬಿತಾ ಸೊಸೈಟಿಯ ನೆಲಮಹಡಿಯಲ್ಲಿ ಸಾವಿರಕ್ಕೂ ಹೆಚ್ಚು ಗೋವುಗಳನ್ನು, ಡೋಂಗರ ಪಳ್ಳಿಯಲ್ಲಿ 800, ಮುಗ್ದುಂ ಕಾಲೋನಿಯಲ್ಲಿ 900, ಆಜಾದ ನಗರದಲ್ಲಿ 600, ಚಿನ್ನದಪಳ್ಳಿ, ಬಂದರು ರೋಡ್ನ 1,2,3 ಮತ್ತು 4ನೇ ಅಡ್ಡ ರಸ್ತೆಯಲ್ಲಿ, ಹನುಮಾನ್ ನಗರದಲ್ಲಿ ಬೆಂಡೆಕಾನನದಲ್ಲಿ ಸಾವಿರಾರು ಹಸುಗಳನ್ನು ಸಂಗ್ರಹಿಸಿಡಲಾಗಿದೆ ಎಂದು ಆರೋಪಿಸಿದರು.
ಪ್ರತಿ ವರ್ಷ ಭಟ್ಕಳದಲ್ಲಿ ಅನಧಿಕೃತವಾಗಿ ಭಾರಿ ಪ್ರಮಾಣದಲ್ಲಿ ಗೋವುಗಳನ್ನು ಹಿಂಸಾತ್ಮಕವಾಗಿ ಬಂಧಿಸಿ ಹತ್ಯೆ ಮಾಡಲಾಗುತ್ತಿದೆ. ಕೂಡಲೇ ಈ ಬಗ್ಗೆ ಜಿಲ್ಲಾಡಳಿತ, ಶಾಸಕರು, ಭಟ್ಕಳದ ಕೋಮು ಸೌಹಾರ್ದ ವೇದಿಕೆಯ ಜತಗೂಡಿ ಶಾಂತಿ ಸಭೆ ನಡೆಸಿ ಅನಧಿಕೃತವಾಗಿ ಕಡಿಯಲು ತಂದಿರುವ ಗೋವುಗಳನ್ನು ರಕ್ಷಣೆ ಮಾಡಬೇಕು. ಅಲ್ಲದೆ ಈ ರಿತಿ ಕಾನೂನು ಬಾಹಿರ ಚಟುವಟಿಕೆ ನಡೆಸಿ ಹಿಂದುಗಳ ಧಾರ್ಮಿಕ ಭಾವನೆ ಮೇಲೆ ದಕ್ಕೆ ತರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಯೋಗಿ ಬ್ರಿಗೇಡ್ನ ಜಿಲ್ಲಾಧ್ಯಕ್ಷ ಬಿ.ಜಿ ಮೋಹನ್, ಸಂಚಾಲಕ ಪ್ರಸಾದ ಕಾಮತ್, ಸೋಮಚಂದ್ರ ಉಳ್ವೇಕರ್, ಅನುಮೋಲ್ ರೇವಣಕರ್, ಸಚೀನ್ ರಾಣೆ, ಸಾಗರ್ ಕುರ್ಡೇಕರ್, ಪ್ರಶಾಂತ, ನಾಗೇಶ ನಾಯ್ಕ, ದೇವದತ್ತ ನಾಯ್ಕ, ಮಹೇಶ ಹರಿಕಂತ್ರ ಉಪಸ್ಥಿತರಿದ್ದರು.
Leave a Comment