ಹಳಿಯಾಳ ;
ಕೆನರಾ ಕ್ಷೇತ್ರದ ಸಂಸದ ಅನಂತಕುಮಾರ ಹೆಗಡೆ ಅವರು ಕೇಂದ್ರದ ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತೆ ಖಾತೆಯ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಂತೆಯೇ ಇಲ್ಲಿಯ ಬಿಜೆಪಿ ಘಟಕದÀವರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಬ್ರಮಿಸಿದರು.
ರವಿವಾರ ಇಲ್ಲಿಯ ಶ್ರೀ ಗಣೇಶ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸಿದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ನಂತರ ಪಟ್ಟಣದ ಶಿವಾಜಿ ವೃತ್ತಕ್ಕೆ ಆಗಮಿಸಿ ಶಿವಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಗೌರವ ಸೂಚಿಸಿ ನಂತರ ವೃತ್ತದಲ್ಲಿ ಪಟಾಕಿ ಸಿಡಿಸಿ ತಮ್ಮ ಸಂತಸ ವ್ಯಕ್ತ ಪಡಿಸಿದರು. ನಂತರ ಕ್ರೀಡಾ ಭವನದಲ್ಲಿರುವ ಶ್ರೀ ಬಸವೇಶ್ವರ ವೃತ್ತಕ್ಕೆ ಆಗಮಿಸಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಾರ್ವಜನಿಕರಿಗೆ ಸಿಹಿ ಹಂಚುವುದರ ಮೂಲಕ ಹರ್ಷ ವ್ಯಕ್ತ ಪಡಿಸಿದರು.
ಮಾಜಿ ಶಾಸಕ ಸುನೀಲ ಹೆಗಡೆ ಈ ಸಂದರ್ಭದಲ್ಲಿ ಮಾತನಾಡಿ, ಅನಂತಕುಮಾರ ಹೆಗಡೆ ಅವರು ಹೋರಾಟಗಾರರಾಗಿದ್ದು ಅವರಿಗೆ ಈ ಹಿಂದೆಯೇ ಕೇಂದ್ರದಲ್ಲಿ ಸಚಿವ ಸ್ಥಾನ ಸಿಗಬೇಕಾಗಿತ್ತು. ಆದರೆ ಇದೀಗ ಅವರಿಗೆ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ದೊರೆತಿದ್ದು ಇದರಿಂದ ಕೆನರಾ ಕ್ಷೇತ್ರದಲ್ಲಿ ಅಭಿವೃದ್ದಿಯ ಪರ್ವ ಆರಂಭವಾಗಲಿದೆ. ಅಲ್ಲದೇ ಹಳಿಯಾಳ ಮತ್ತು ಜೋಯಿಡಾ ಮತಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಸೇರಿದಂತೆ ಕ್ಷೇತ್ರದ ಅಭಿವೃದ್ದಿಗೆ ಹೆಚ್ಚಿನ ಒತ್ತು ದೊರೆಯಲಿದೆ . ಜಿಲ್ಲೆಯಲ್ಲಿ ಅವರಿಂದ ಕೌಶಲ್ಯ ಕ್ಕೆ ಸಂಬಂಧಿಸಿದಂತೆ ಹಲವಾರು ಯೋಜನೆಗಳು ಜಿಲ್ಲೆಗೆ ಸುಲಭವಾಗಿ ಬರುವುದರಿಂದ ಜಿಲ್ಲೆಯಲ್ಲಿರುವ ನಿರುದ್ಯೋಗ ಮತ್ತು ಸಂಪನ್ಮೂಲಗಳ ಬಳಕೆ ಆಗಲಿದೆ ಎಂದರು.
ಮುಖಂಡ ರಾಜೂ ಧೂಳಿ ಮಾತನಾಡಿ, ಅನಂತಕುಮಾರ ಅವರಿಗೆ ಪ್ರದಾನಿ ಮೋದಿ ಅವರು ಕೇಂದ್ರ ಸಂಪುಟದಲ್ಲಿ ಸ್ಥಾನಮಾನ ನೀಡುವುದರ ಮೂಲಕ ಕೆನರಾ ಕ್ಷೇತ್ರದ ಜನರಿಗೆ ಗೌರವ ನೀಡಿದ್ದಾರೆ. ಇವರ ಅಧಿಕಾರಾವಧಿಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ದಿಗಳು ನಡೆಯಲಿದ್ದು, ಕೇಂದ್ರದಿಂದ ದೊರೆಯುವ ಎಲ್ಲಾ ಪ್ರಮುಖ ಯೋಜನೆಗಳು ಜಿಲ್ಲೆಗೆ ತಲುಪಲಿದ್ದು ಒಟ್ಟಿನಲ್ಲಿ ಅಭಿವೃದ್ದಿಗೆ ವೇಗ ದೊರೆಯಲಿದೆ . ಕೆನರಾ ಕ್ಷೇತ್ರದಲ್ಲಿ ಕೌಶಲ್ಯಗಳ ತರಬೇತಿ, ಯುವಕರಿಗೆ ಕೌಶಲ್ಯದ ಕುರಿತು ಅರಿವು ಸೇರಿದಂತೆ ಇನ್ನಿತರ ಪ್ರಯೋಜನಗಳ ಸಹ ಲಭಿಸಲಿದೆ.
ತಾಲೂಕ ಅಧ್ಯಕ್ಷ ಶಿವಾಜಿ ನರಸಾನಿ, ತಾಲೂಕ ಪ್ರಧಾನ ಕಾರ್ಯಧರ್ಶಿ ವಿ ಎಮ್ ಪಾಟೀಲ , ಸೊನಪ್ಪಾ ಸುಣಕಾರ, ಬಿಜೆಪಿ ಮುಖಂಡರಾಧ ರಾಜು ಧೂಳಿ, ಎಸ್ ಎಲ್ ಅರಶಿಣಗೇರಿ, ಅನೀಲ ಮುತ್ನಾಳೆ, ಗಣಪತಿ ಕರಂಜೆಕರ, ಲಕ್ಷ್ಮೀ ಚವ್ಹಾನ, ರೂಪಾ ಅನೀಲ ಗಿರಿ, ಸಂತಾನ ಸಾವಂತ ಬಸಣ್ಣಾ ಕುರಬಗಟ್ಟಿ, ಅಪ್ಪು ಚರಂತಿಮಠ, ರಘು ನಾಯಕ, ಮಂಜು ಅಳ್ನಾವರಕರ, ವಿಜಯ ಬೊಬಾಟಿ ಅಣ್ಣಪ್ಪಾ ವಡ್ಡರ, ನಾಗರಾಜ ವಡ್ಡರ, ನಾರಾಯಣ ಮಿಂಡೊಳಕರ, ಆನಂದ ಕಂಚನಾಳಕರ, ರಾಘವೆಂದ್ರ ಚಲವಾದಿ ಇದ್ದರು,
Leave a Comment