• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಗಣಪತಿ ವಿಸರ್ಜನೆ

September 6, 2017 by Sachin Hegde Leave a Comment

ಕಾರವಾರ:

ಚತುರ್ಥಿಯ ದಿನ ಪ್ರತಿಷ್ಠಾಪಿಸಲ್ಪಟ್ಟ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಲಕ್ಷಾಂತರ ಜನರ ಸಮ್ಮುಖದಲ್ಲಿ ಸೋಮವಾರ ಸಂಜೆ ಸಮುದ್ರದಲ್ಲಿ ಸಾಮೂಹಿಕವಾಗಿ ವಿಸರ್ಜಿಸಲಾಯಿತು. ಗಣೇಶ ಮೂರ್ತಿಗಳನ್ನು ವಿಸರ್ಜನೆಗೆ ಒಯ್ಯುವ ಸಂದರ್ಭದಲ್ಲಿ ನಡೆದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಭಕ್ತ ಸಮೂಹ ಕುಣಿದು ಕುಪ್ಪಳಿಸಿದರು.
ಆಟೋ ರಿಕ್ಷಾ, ಮಾರುತಿ ಗಲ್ಲಿ, ಕಾಜುಭಾಗ, ಕೋಡಿಭಾಗ, ಶಿರವಾಡ, ಹರಿದೇವನಗರ, ಸದಾಶಿಗಡದ ಮಾರುಕಟ್ಟೆ, ಸದಾಶಿಗಡ ಕ್ರಾಸ್ ಹಾಗೂ, ನಂದನಗದ್ದಾ ಸೇರಿದಂತೆ ಇನ್ನಿತರರ ಕಡೆ ಪ್ರತಿಷ್ಠಾಪಿತವಾಗಿದ್ದ ಸಾರ್ವಜನಿಕರ ಗಣೇಶನನ್ನು ಸಮುದ್ರಗಳಲ್ಲಿ ವಿಸರ್ಜನೆಗೊಂಡವು. ನಗರದ ಪ್ರಮುಖ ರಸ್ತೆಗಳನ್ನು ಮೆರವಣಿಗೆಯ ಸಂದರ್ಭದಲ್ಲಿ ವಿವಿಧ ಪ್ರದೇಶಗಳಿಂದ ಆಗಮಿಸಿದ ಜನರು ಚಿತ್ರಗೀತೆಯ ಹಾಡುಗಳಿಗೆ ತಕ್ಕಂತೆ ಕುಣಿದು ಕುಪ್ಪಳಿಸಿದರು. ಮೆರವಣಿಗೆಯ ಸುತ್ತಮುತ್ತಲು ಗಣೇಶ ವಿಗ್ರಹಗಳನ್ನು ಹಾಗೂ ಕುಣಿದು ಕುಪ್ಪಳಿಸುತ್ತಿರುವ ಯುವಕರನ್ನು ವಿಕ್ಷೀಸಲು ಜನರು ಕಿಕ್ಕಿರಿದು ಸೇರಿದ್ದರು. ಮೆರವಣಿಗೆಯ ಸಂದರ್ಭದಲ್ಲಿ ಆಯಾ ಗಣೇಶೋತ್ಸವ ಸಮಿತಿಯವರು ತಂದಿದ್ದ ಆರ್ಕೇಸ್ಟ್ರಾದ ಚಲನಚಿತ್ರಗಳ ಹಾಡಿಗೆ ಯುವಕರ ತಂಡ ಕುಣಿದು ಸಂಭ್ರಮಿಸಿದರು. ಗಣಪ ವಿಸರ್ಜನೆಗೆ ಸಮುದ್ರದತ್ತ ತಲುಪುತ್ತಿದ್ದಂತೆ ಸೇರಿದ ಜನರು ಗಣಪತಿ ಬಪ್ಪಾ ಮೋರಿಯಾ… ಫುಡ್ಚ್ಯಾ ವರ್ಷಿ ಲವ್ಕರ್ಯಾ… ಎನ್ನುವ ಘೋಷಣೆಗಳು ಮುಗಿಲು ಮಟ್ಟಿದ್ದವು. ಬಂದ ನಿಮಿತ್ತ ನಗರದ ಬಹುತೇಕ ಅಂಗಡಿ ಮಳಿಗೆಗಳನ್ನು ಮುಚ್ಚಿ ಗಣೇಶನ ವಿಸರ್ಜನಾ ಕಾರ್ಯಕ್ಕೆ ಪಾಲ್ಗೊಂಡು ವಿಘ್ನೇಶ್ವರನಿಗೆ ನಮನ ಸಲ್ಲಿಸಿದರು. ನಗರದಲ್ಲಿ ಸಂಜೆಯಾಗುತ್ತಿದ್ದಂತೆ ಒಂದೊಂದಾಗಿ ಗಣೇಶನ ವಿಗ್ರಹಗಳು ಸಮುದ್ರದತ್ತ ಸಾಗುತ್ತಿದ್ದಂತೆ ಮುಖ್ಯ ರಸ್ತೆ ಹಾಗೂ ಕಡಲ ತೀರದಲ್ಲಿರುವ ವಿದ್ಯುತ್ ಲೈಟ್‍ಗಳನ್ನು ಕಡಿತಗೊಳಿಸಲಾಗಿತ್ತು. ಕೇಲವು ಗಣೇಶನ ವಿಗ್ರಹಗಳ ನಗರದ ಕಡಲ ತೀರದಲ್ಲೇ ವಿಸರ್ಜನೆ ಮಾಡಲ್ಪಡಲಾಗುತ್ತಿದೆ. ಆದರೆ ವಿದ್ಯುತ್ ಲೈಟ್ ಕಡಿತವಾಗಿದ್ದರಿಂದ ಸಾರ್ವಜನಿರು ಆಕ್ಷೇಪ ವ್ಯಕ್ತವಪಡಿಸಿದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Karwar News Tagged With: ಆಟೋ ರಿಕ್ಷಾ, ಕಾಜುಭಾಗ, ಕುಣಿದು ಕುಪ್ಪಳಿ, ಕೋಡಿಭಾಗ, ಗಣಪತಿ ವಿಸರ್ಜನೆ, ಚತುರ್ಥಿಯ, ಚಿತ್ರಗೀತೆಯ ಹಾಡುಗಳಿಗೆ ತಕ್ಕಂತೆ, ದಿನ, ನಂದನಗದ್ದಾ, ಪ್ರತಿಷ್ಠಾಪಿಸಲ್ಪಟ್ಟ, ಮಾರುತಿ ಗಲ್ಲಿ, ಲಕ್ಷಾಂತರ ಜನರ ಸಮ್ಮುಖ, ವಿದ್ಯುತ್ ಲೈಟ್‍, ಶಿರವಾಡ, ಸದಾಶಿಗಡ ಕ್ರಾಸ್, ಸದಾಶಿಗಡದ ಮಾರುಕಟ್ಟೆ, ಸಮುದ್ರದಲ್ಲಿ ಸಾಮೂಹಿಕವಾಗಿ ವಿಸರ್ಜಿಸಲಾಯಿತು., ಸಾರ್ವಜನಿಕ ಗಣೇಶ ಮೂರ್ತಿ, ಹರಿದೇವನಗರ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar