ಕಾರವಾರ:
ಚತುರ್ಥಿಯ ದಿನ ಪ್ರತಿಷ್ಠಾಪಿಸಲ್ಪಟ್ಟ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಲಕ್ಷಾಂತರ ಜನರ ಸಮ್ಮುಖದಲ್ಲಿ ಸೋಮವಾರ ಸಂಜೆ ಸಮುದ್ರದಲ್ಲಿ ಸಾಮೂಹಿಕವಾಗಿ ವಿಸರ್ಜಿಸಲಾಯಿತು. ಗಣೇಶ ಮೂರ್ತಿಗಳನ್ನು ವಿಸರ್ಜನೆಗೆ ಒಯ್ಯುವ ಸಂದರ್ಭದಲ್ಲಿ ನಡೆದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಭಕ್ತ ಸಮೂಹ ಕುಣಿದು ಕುಪ್ಪಳಿಸಿದರು.
ಆಟೋ ರಿಕ್ಷಾ, ಮಾರುತಿ ಗಲ್ಲಿ, ಕಾಜುಭಾಗ, ಕೋಡಿಭಾಗ, ಶಿರವಾಡ, ಹರಿದೇವನಗರ, ಸದಾಶಿಗಡದ ಮಾರುಕಟ್ಟೆ, ಸದಾಶಿಗಡ ಕ್ರಾಸ್ ಹಾಗೂ, ನಂದನಗದ್ದಾ ಸೇರಿದಂತೆ ಇನ್ನಿತರರ ಕಡೆ ಪ್ರತಿಷ್ಠಾಪಿತವಾಗಿದ್ದ ಸಾರ್ವಜನಿಕರ ಗಣೇಶನನ್ನು ಸಮುದ್ರಗಳಲ್ಲಿ ವಿಸರ್ಜನೆಗೊಂಡವು. ನಗರದ ಪ್ರಮುಖ ರಸ್ತೆಗಳನ್ನು ಮೆರವಣಿಗೆಯ ಸಂದರ್ಭದಲ್ಲಿ ವಿವಿಧ ಪ್ರದೇಶಗಳಿಂದ ಆಗಮಿಸಿದ ಜನರು ಚಿತ್ರಗೀತೆಯ ಹಾಡುಗಳಿಗೆ ತಕ್ಕಂತೆ ಕುಣಿದು ಕುಪ್ಪಳಿಸಿದರು. ಮೆರವಣಿಗೆಯ ಸುತ್ತಮುತ್ತಲು ಗಣೇಶ ವಿಗ್ರಹಗಳನ್ನು ಹಾಗೂ ಕುಣಿದು ಕುಪ್ಪಳಿಸುತ್ತಿರುವ ಯುವಕರನ್ನು ವಿಕ್ಷೀಸಲು ಜನರು ಕಿಕ್ಕಿರಿದು ಸೇರಿದ್ದರು. ಮೆರವಣಿಗೆಯ ಸಂದರ್ಭದಲ್ಲಿ ಆಯಾ ಗಣೇಶೋತ್ಸವ ಸಮಿತಿಯವರು ತಂದಿದ್ದ ಆರ್ಕೇಸ್ಟ್ರಾದ ಚಲನಚಿತ್ರಗಳ ಹಾಡಿಗೆ ಯುವಕರ ತಂಡ ಕುಣಿದು ಸಂಭ್ರಮಿಸಿದರು. ಗಣಪ ವಿಸರ್ಜನೆಗೆ ಸಮುದ್ರದತ್ತ ತಲುಪುತ್ತಿದ್ದಂತೆ ಸೇರಿದ ಜನರು ಗಣಪತಿ ಬಪ್ಪಾ ಮೋರಿಯಾ… ಫುಡ್ಚ್ಯಾ ವರ್ಷಿ ಲವ್ಕರ್ಯಾ… ಎನ್ನುವ ಘೋಷಣೆಗಳು ಮುಗಿಲು ಮಟ್ಟಿದ್ದವು. ಬಂದ ನಿಮಿತ್ತ ನಗರದ ಬಹುತೇಕ ಅಂಗಡಿ ಮಳಿಗೆಗಳನ್ನು ಮುಚ್ಚಿ ಗಣೇಶನ ವಿಸರ್ಜನಾ ಕಾರ್ಯಕ್ಕೆ ಪಾಲ್ಗೊಂಡು ವಿಘ್ನೇಶ್ವರನಿಗೆ ನಮನ ಸಲ್ಲಿಸಿದರು. ನಗರದಲ್ಲಿ ಸಂಜೆಯಾಗುತ್ತಿದ್ದಂತೆ ಒಂದೊಂದಾಗಿ ಗಣೇಶನ ವಿಗ್ರಹಗಳು ಸಮುದ್ರದತ್ತ ಸಾಗುತ್ತಿದ್ದಂತೆ ಮುಖ್ಯ ರಸ್ತೆ ಹಾಗೂ ಕಡಲ ತೀರದಲ್ಲಿರುವ ವಿದ್ಯುತ್ ಲೈಟ್ಗಳನ್ನು ಕಡಿತಗೊಳಿಸಲಾಗಿತ್ತು. ಕೇಲವು ಗಣೇಶನ ವಿಗ್ರಹಗಳ ನಗರದ ಕಡಲ ತೀರದಲ್ಲೇ ವಿಸರ್ಜನೆ ಮಾಡಲ್ಪಡಲಾಗುತ್ತಿದೆ. ಆದರೆ ವಿದ್ಯುತ್ ಲೈಟ್ ಕಡಿತವಾಗಿದ್ದರಿಂದ ಸಾರ್ವಜನಿರು ಆಕ್ಷೇಪ ವ್ಯಕ್ತವಪಡಿಸಿದರು.
Leave a Comment