ಹಳಿಯಾಳ ;
ಸಾಹಿತಿ ಹಾಗೂ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದನ್ನು ವಿರೋಧಿಸಿ ಹಳಿಯಾಳ ಕಾರ್ಯನಿರತ ಪತ್ರಕರ್ತರ ಸಂಘ, ಜಯಕರ್ನಾಟಕ ಸಂಘಟನೆ, ಬಸವಕೇಂದ್ರ ಮತ್ತು ವಿಜಯ ಸಂದೇಶ ಪತ್ರಿಕೆಯ ಬಳಗದವರು ಶಿವಾಜಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಕೊಲೆಗಡುಕರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘವು ಸೇರಿದಂತೆ ಒಟ್ಟೂ 4 ಸಂಘಟನೆಗಳ ಪದಾಧಿಕಾರಿಗಳು ಸಾರ್ವಜನಿಕರೊಂದಿಗೆ ಸೇರಿ ಬುಧವಾರ ಸಾಯಂಕಾಲ ಇಲ್ಲಿಯ ಶಿವಾಜಿ ವೃತ್ತದಲ್ಲಿ ಜಮಾಯಿಸಿ ಹತ್ಯೆಯನ್ನು ಖಂಡಿಸಿ ಇದೊಂದು ಅಮಾನವೀಯ ಕೃತ್ಯವಾಗಿದೆ. ಕೆಲ ಕಾಲ ಮಾನವ ಸರಪಳಿಯನ್ನು ರಚಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ನಂತರ ಮಿನಿವಿಧಾನಸೌಧಕ್ಕೆ ಆಗಮಿಸಿ ಮುಖ್ಯಮಂತ್ರಿಗಳ ಹೆಸರಿನಲ್ಲಿದ್ದ ಮನವಿಯನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಿದರು.
ಹಿರಿಯ ಪತ್ರಕರ್ತೆ, ವಿಚಾರವಾದಿಯಾಗಿದ್ದ ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಕೊಂದವರನ್ನು ತಕ್ಷಣ ಸರಕಾರವು ಪತ್ತೆ ಹಚ್ಚುವಂತೆ ಆಗ್ರಹಿಸಿದವು. ಕಾನೂನನ್ನು ಕೈಗೆತ್ತಿಕೊಂಡು ಅಭಿವೃಕ್ತಿ ಸ್ವಾತ್ರಂತ್ಯದ ಕೊಲೆ ಮಾಡಲಾಗಿದೆ. ಆದಷ್ಟು ಬೇನಗೆ ಹಂತಕರನ್ನು ಬಂಧಿಸಿ ಭಯಮುಕ್ತ ವಾತಾವರಣ ನಿರ್ಮಿಸುವಂತೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷೆ ಸುಮಂಗಲಾ ಅಂಗಡಿ, ಮಂಜುನಾಥ ಶೇರಖಾನೆ, ಯೋಗರಾಜ್ ಕರಾಂಡೆ, ದೇವಿದಾಸ ನಾಯ್ಕ, ನಾಗರಾಜ ಶಹಾಪೂರಕರ, ಸಂತೋಷ ಹಬ್ಬು, ನಿಲೇಶ ಮಹಾಜನ, ಜಯ ಕರ್ನಾಟಕ ಸಂಘಟನೆಯ ವಿಲಾಸ ಕಣಗಲಿ, ಶಿರಾಜ್ ಮುನವಳ್ಳಿ, ಗಣೇಶ ಗೊಸಪ್ಪನ್ನವರ, ರಮೇಶ ಬಸವಕೇಂದ್ರದ ಚಂದ್ರಕಾಂತ ಅಂಗಡಿ, ಮಹಾದೇವಿ ಅಂಗಡಿ, ಪ್ರಕಾಶ ಅಂಗಡಿ, ರಾಮನಿಂಗ ಸೌದತ್ತಿ, ಸಿದ್ದಲಿಂಗ ನೇಗಿನಹಾಳ ಇತರರು ಇದ್ದರು.
Leave a Comment