ಕಾರವಾರ: ನಗರಸಭೆ ಸದಸ್ಯ ಮಹೇಶ್ ಥಾಮ್ಸೆ ಹಾಗೂ ಬಿಜೆಪಿ ಕಾರ್ಯಕರ್ತ ಸುನಿಲ ಥಾಮ್ಸೆ ಪರಸ್ಪರ ಹೊಡೆದಾಡಿಕೊಂಡ ಘಟನೆ ಕೋಡಿಭಾಗದ ಮರಾಠೆ ಸ್ಕೂಲ್ ಬಳಿ ನಡೆದಿದೆ.
ಗಣೇಶ ವಿಸರ್ಜನೆ ವೇಳೆ ಕೋಡಿಭಾಗದಲ್ಲಿ ನಡದ ಗಲಾಟೆಯಲ್ಲಿ ಮಹೇಶ್ ಥಾಮ್ಸೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದಕ್ಕೆ ನಗರಸಭೆ ಸದಸ್ಯ ಮಹೇಶ್ ಥಾಮ್ಸೆ ಒತ್ತಡವೇ ಕಾರಣ ಎಂದು ತಿಳಿದ ಸುನೀಲ ಥಾಮ್ಸೆ ಬುಧವಾರ ಈ ಕುರಿತು ಪ್ರಶ್ನಿಸಿದ್ದಾರೆ. ಇದೇ ವಿಷಯ ತಾರಕ್ಕಕ್ಕೆ ತೆರಳಿದ್ದು ಇಬ್ಬರು ಹೊಡೆದಾಡಿಕೊಂಡಿದ್ದಾರೆ. ಘಟನೆ ವೇಳೆ ಇಬ್ಬರಿಗೂ ಚಿಕ್ಕಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಈ ಕುರಿತು ಎರಡು ಕಡೆಯಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Leave a Comment