ಕಾರವಾರ: ತಾಲೂಕಿನ ನಗೆಕೋವೆ, ಶಿರ್ವೆ, ಬೇಳುರು, ಹಣಕೋಣ, ಬೈರೆ ಇತ್ಯಾದಿ ಗ್ರಾಮಗಳಲ್ಲಿ ಮುಂಗಾರು ಭತ್ತದ ಬೆಳೆಗೆ ಅಲ್ಲಲ್ಲಿ ಎಲೆ ಮಡಚುವ ಹಾಗೂ ಎಲೆಸುರುಳಿ ಹುಳುವಿನ ಬಾಧೆ ಕಂಡು ಬಂದಿದೆ.
ಭತ್ತದ ಬೆಳೆಯ ಏಲೆಯ ಭಾಗವನ್ನು ಕೀಟಗಳು ಕಡಿದು ತಿಂದು ಹಾನಿ ಮಾಡಿವೆ. ಇದರ ಹತೋಟಿಗಾಗಿ ರೈತರು ರೈತ ಸಂಪರ್ಕ ಕೇಂದ್ರಗಳಲ್ಲಿ ಸಹಾಯಧನದಲ್ಲಿ ಲಭ್ಯವಿರು ಮೊನೊಕ್ರೊಟೋಫಾಸ್ 1.30 ಮಿ ಲೀ ಆಥವಾ ಕ್ಲೋರೋಪೈರಿಫಾಸ್ 2.00 ಮಿ ಲೀ ಒಂದು ಲೀಟರ್ ನೀರಿಗೆ ಬೇರೆಸಿ ಸಿಂಪರಣೆ ಮಾಡಲು ಕಾರವಾರ ತಾಲೂಕು ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಎಮ್.ಎಮ್. ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Leave a Comment