ಹೊನ್ನಾವರ;
ಪ್ರತಿಯೊಬ್ಬರಲ್ಲೂಒಂದಲ್ಲಾಒಂದು ಪ್ರತಿಭೆಇದ್ದೇಇರುತ್ತದೆ. ವಿದ್ಯಾರ್ಥಿಗಳು ಸಿಕ್ಕ ಅವಕಾಶವನ್ನು ಬಳಸಿಕೊಂಡು ತಮ್ಮಲ್ಲಿಸುಪ್ತವಾಗಿರುವಪ್ರತಿಭೆಗಳನ್ನು ಪ್ರದರ್ಶಿಸಬೇಕು ಎಂದು ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ ನ ಅಧ್ಯಕ್ಷರಾದ ನಾಗರಾಜ ನಾಯಕತೊರ್ಕೆಅವರು ಹೇಳಿದರು. ಹೊನ್ನಾವರತಾಲೂಕಿನ ಶ್ರೀ ಸುಬ್ರಹ್ಮಣ್ಯ ಸಂಯುಕ್ತ ಪದವಿಪೂರ್ವಕಾಲೇಜಿನಲ್ಲಿಕುಮಟಾದ ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು
ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಮತ್ತುಇತರೇ ವಿದ್ಯಾರ್ಥಿಗಳನ್ನು ಸಾಧನೆಗೈಯುವಂತೆ ಹುರಿದುಂಬಿಸುವ ಹಾಗೂ ವಿದ್ಯಾರ್ಥಿಗಳ ಸಾಧನೆಯ ಹಿಂದಿನ ಶಿಕ್ಷಕರ ಶ್ರಮವನ್ನು ಸಮಾಜಕ್ಕೆತೋರ್ಪಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ತಮ್ಮಆಸಕ್ತಿಯ ಕ್ಷೇತ್ರಗಳಲ್ಲಿ ಪ್ರಯತ್ನಪೂರ್ವಕವಾಗಿ ಮುಂದುವರಿದಲ್ಲಿಯಶಸ್ಸು ಸಾಧ್ಯಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೀರಾ ನಾಯ್ಕ, ವೆಂಕಟರಮಣ ಹೆಗಡೆ, ಎಸ್. ಆರ್. ಹೆಗಡೆ, ರೋಷನ್ ಶಾನಭಾಗ ಮುಂತಾದವರು ಮಾತನಾಡಿ ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ ನ ಕಾರ್ಯವನ್ನು ಶ್ಲಾಘಿಸಿದರು.
ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ ಮುಗ್ವಾಗ್ರಾಮ ಪಂಚಾಯತಅಧ್ಯಕ್ಷÀಟಿ.ಎಸ್. ಹೆಗಡೆ ಮಾತನಾಡಿ ನಿವೃತ್ತಿಯ ಬಳಿಕವೂ ಸಮಾಜದ ನಂಟು ಕಳೆದುಕೊಳ್ಳದೇ ನಾಗರಾಜ ನಾಯಕತೊರ್ಕೆಯವರು ಸಾಮಾಜಿಕ ಸೇವೆಗಳಲ್ಲಿ ತೊಡಗಿಕೊಂಡಿರುವುದುಅಭಿನಂದನಾರ್ಹಎಂದರು.
ಪ್ರಾಂಶುಪಾಲರಾದ ಎಸ್.ಜಿ.ಭಟ್., ಮುಖ್ಯಾಧ್ಯಾಪಕರಾದ ಆರ್. ಆರ್.ಹೆಗಡೆಅವರನ್ನು ಸನ್ಮಾನಿಸಿ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಯ ಪ್ರತಿಭಾವಂತವಿದ್ಯಾರ್ಥಿಗಳಾದ ಸುಚಿತ್ರಾ ಭಟ್, ಕವನ ಹೆಗಡೆ, ಭವ್ಯ ಮಡಿವಾಳ ಹಾಗೂ ನಾಗರತ್ನಗೌಡ ಇವರುಗಳಿಗೆ ಪುರಸ್ಕಾರ ನೀಡಲಾಯಿತು.
ಈ ಸಂದರ್ಭದಲ್ಲಿ ನಾರಾಯಣ ಎಮ್. ಹೆಗಡೆ, ಎಮ್. ಎಸ್. ಹೆಗಡೆಕಣ್ಣಿ, ಎಸ್. ಜಿ. ಭಟ್ ಹಾರೂರಿ, ಟ್ರಸ್ಟ್ ಕಾರ್ಯದರ್ಶಿ ಅರುಣ ಕವರಿ, ಪ್ರಶಾಂತ ಗಾಂವಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು ಪ್ರಾಂಶುಪಾಲ ಎಸ್.ಜಿ ಭಟ್ ಸ್ವಾಗತಿಸಿದರು, ಆರ್. ಆರ್. ಹೆಗಡೆ ವಂದಿಸಿದರು. ಶೀಲಾ ಮೇಸ್ತ ನಿರೂಪಿಸಿದರು.
Leave a Comment