ಹಳಿಯಾಳ: ನಮ್ಮ ದೇಶದಲ್ಲಿರುವ ಯುವಜನತೆಯೇ ದೇಶದ ಶಕ್ತಿ ಅವರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡುವ ಕಾರ್ಯ ಪಾಲಕರ ಮೇಲಿದೆ. ಮಕ್ಕಳಿಗೆ ಒಳ್ಳೆಯ sಸಂಕೃತಿ, ಕಲೆ, ಜೊತೆಗೆ ಶಿಕ್ಷಣವನ್ನು ಕೊಡಿಸಿ ವಿದ್ಯಾವಂತರನ್ನಾಗಿ ಮಾಡಿ ಎಂದು ಹಳಿಯಾಳ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ ಅಹ್ಮದ ಮುಲ್ಲಾ ಕರೆ ನೀಡಿದರು.
ಅವರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆ ಹಳಿಯಾಳ ಹಾಗೂ ಎಲ್.ಐ.ಸಿಯ ಆಮ ಆದ್ಮಿ ಯೋಜನೆಯಡಿಯಲ್ಲಿ ಸ್ವ- ಸಹಾಯ ಸಂಘದ ಸದಸ್ಯರ ಮಕ್ಕಳಿಗೆ ಶಿಷ್ಯ ವೇತನ ವಿತರಣೆ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು. ಪ್ರತಿ ಒಬ್ಬ ವಿಧ್ಯಾರ್ಥಿ ಉಜ್ವಲವಾದ ಭವಿಷ್ಯವನ್ನು ರೂಪಿಸಿಕೊಡಲು ಗುಣಮಟ್ಟ ಶಿಕ್ಷಣದ ಅಗತ್ಯ ಇರುತ್ತದೆ. ಸ್ಫರ್ದಾತ್ಮಕ ಯುಗದಲ್ಲಿ ಮಕ್ಕಳು ತಾಳ್ಮೆ, ಶ್ರದ್ಧೆ ಹಾಗೂ ಉತ್ತಮ ನಡುವಳಿಕೆಗಳನ್ನು ಬೆಳಸಿಕೊಂಡು ಸತ್ಪ್ರಜೆ ಯಾಗುವಂತೆ ಸಲಹೆ ನೀಡಿದರು.
ಎಲ್.ಐ.ಸಿ ಆಪ್ ಇಂಡಿಯಾದ ಹಿರಿಯ ಪ್ರಬಂಧಕ ಎ.ಎಸ್. ಕುಲಕರ್ಣಿ ಮಾತನಾಡಿ ದೇಶ ಬೆಳೆಯಬೇಕಾದರೆ ಗ್ರಾಮ ಬೆಳೆಯಬೇಕು ಗ್ರಾಮ ಬೆಳೆಯಬೇಕಾದರೆ ಸಮಾಜದಲ್ಲಿರುವ ವಿದ್ಯಾರ್ಥಿಗಳು ಗುಣಮಟ್ಟ ಶಿಕ್ಷಣದ ಜೊತೆಗೆ ಕೌಶಲ್ಯಗಳನ್ನು ಆಳವಡಿಸಿಕೊಳ್ಳಬೇಕೆಂದರು.
ಸಂಸ್ಥೆಯ ನೀರ್ದೇಶಕ ನಿತ್ಯಾನಂದ ಆರ್ ವೈದ್ಯ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಸುಮಾರು 1811 ಕಿಂತ ಹೆಚ್ಚು ಸ್ವ-ಸಹಾಯ ಸಂಘಗಳಿದ್ದು 21448 ಮಹಿಳೆಯರು ಸೆರ್ಪಡೆಗೊಂಡಿದ್ದಾರೆ. ಸಂಸ್ಥೆಯು ಪ್ರಾರಂಭದಿಂದ ಇವರೆಗೆ 46790 ಸದಸ್ಯರ ಜನಶ್ರೀ ಬಿಮಾ ಯೋಜನೆಯಲ್ಲಿ ನೊಂದಣಿ ಆಗಿದ್ದು 11190 ಸದಸ್ಯರ ಮಕ್ಕಳಿಗೆ ಸುಮಾರು ರೂ. 67.14 ಲಕ್ಷ ಶಿಷ್ಯ ವೇತನ ವಿತರಿಸಿ ಸಂಸ್ಥೆ ತನ್ನದೇ ಆದ ಕಾರ್ಯನಿರ್ವಹಿಸುತ್ತಿದ್ದು ಇದರ ಪ್ರಯೋಜನ ಪಡೆಯುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸ್ವ-ಸಹಾಯ ಸಂಘದ ಸದಸ್ಯರ ಸುಮಾರು 108 ವಿದ್ಯಾರ್ಥಿಗಳಿಗೆ 0.64 ಲಕ್ಷ ಕಿಂತ ಹೆಚ್ಚು ಶಿಷ್ಯ ವೇತನವನ್ನು ವಿತರಿಸಲಾಯಿತು. ಸಂಸ್ಥೆಯ ಯೋಜನಾ ಸಂಯೋಜಕ ವಿನಾಯಕ ಚವ್ಹಾಣ, ಸಿಬಿಡಿ ಆರ್ ಸೆಟಿಯ ಕ್ಷೇತ್ರಾಧಿಕಾರಿ ವಿಷ್ಣು ಮಡಿವಾಳ ನಿರೂಪಿಸಿದರು, ಯೋಜನಾಧಿಕಾರಿ ಸಂತೋಷ ಪರೀಟ, ಸುರೆಶ ಗಾವಡೆ ವಂದಿಸಿದರು.
Leave a Comment