ಕಾರವಾರ:
ಕದ್ರಾ ರಾಜೀವನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಇಲಿ ಜ್ವರ ಪ್ರಕರಣ ಪತ್ತೆಯಾಗಿರುವುದು ಆ ಪ್ರದೇಶದ ಜನರಲ್ಲಿ ಆತಂಕ ಶುರುವಾಗಿದೆ.
ಕೈಗಾದ ಅಣು ವಿದ್ಯುತ್ ಘಟಕದಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುವ ನೂರಾರು ನೌಕರಲ್ಲಿ ಬಹುತೇಕರು ಪರ ರಾಜ್ಯದವರಾಗಿದ್ದಾರೆ. ಅವರಲ್ಲಿ ಕೆಲವಷ್ಟು ನೌಕರರು ಕದ್ರಾದ ರಾಜೀವನಗರ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ವಾಸವಾಗಿದ್ದಾರೆ. ಹಾಗಾಗಿ ಹೊರವಲಯದಿಂದ ಬಂದಂತಹ ವ್ಯಕ್ತಿಗಳಿಂದ ಈ ಇಲಿ ಜ್ವರ ಹರಡಿರಬಹುದೆಂದು ಶಂಕಿಸಲಾಗಿದೆ. ಕೆಲ ದಿನಗಳ ಹಿಂದೆ ಹಣಕೋಣದ ವ್ಯಕ್ತಿಯೊಬ್ಬ ಈ ಜ್ವರದಿಂದಲೇ ಮೃತಪಟ್ಟಿದ್ದಾರೆ. ನಾಲ್ಕು ದಿನಗಳ ಹಿಂದೆ ಕದ್ರಾ ಸಮೀಪದ ವ್ಯಕ್ತಿಯೊಬ್ಬನಿಗೆ ಕಾಣಿಸಿಕೊಂಡ ಇಲಿ ಜ್ವರಕ್ಕೆ ಹೆಚ್ಚಿನ ಚಿಕಿತ್ಸೆ ಪಡೆಯಲು ಗೋವಾದ ಬಾಂಬೂಲಿ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲದೆ ಕದ್ರಾ ರಾಜೀವನಗರದ ಮಹಿಳೆಗೆ ಇಲಿ ಜರ ಕಾಣಿಸಿಕೊಂಡಿದ್ದರಿಂದ ಜಿಲ್ಲಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದರು.
Leave a Comment