ಹೊನ್ನಾವರ:
ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ತೇಜಸ್ಸನ್ನು ಹೆಚ್ಚಿಸಿದ ಮಹಾನ ವ್ಯಕ್ತಿಗಳಲ್ಲಿ ಓರ್ವರಾದ ಸರ್. ಎಂ. ವಿಶ್ವೇಶ್ವರಯ್ಯನವರ ಹುಟ್ಟು ಹಬ್ಬದ ಸ್ಮರಣಾರ್ಥ ಪಟ್ಟಣದ ನ್ಯೂ ಇಂಗ್ಲಿಷ ಸ್ಕೂಲ್ನಲ್ಲಿ ಎಂಜೀನಿಯರ್ಸ ಡೇ ಯನ್ನು ವ್ಯೆಶಿಶ್ಟ ಪೂರ್ಣವಾಗಿ ಆಚರಿಸಲಾಯಿತು. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿಶ್ವೇಶ್ವರಯ್ಯನವರ ಜೀವನ ಸಾಧನೆಗಳನ್ನು ಪರಿಚಯಿಸಿ ಎಂಜೀನಿಯರ್ಸ ಡೇ ಆಚರಣೆಯ ಇಂದಿನ ಮಹತ್ವವನ್ನು ತಿಳಿಸಲಾಯಿತು. ಇದೆ ಸಂದರ್ಭದಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳು ಶಿಕ್ಷಕರ ಮಾರ್ಗ ದರ್ಶನದಲ್ಲಿ ಪಟ್ಟಣದ ಹಿರಿಯ ಎಂಜೀನಿಯರ್ಸಗಳಲ್ಲಿ ಓರ್ವರಾದ ಶ್ರೀ ಪಿ. ಡಿ. ಶ್ಯಾನಭಾಗರವರಿಗೆ ಹೂ ಗುಚ್ಚ ನೀಡಿ ಅಭಿನಂದಿಸಿದರು.
Leave a Comment