ಹೊನ್ನಾವರ ಅರ್ಬನ ಬೇಂಕಿನ ಆಡಳಿತ ಮಂಡಳಿಯಲ್ಲಿ ಸತತ 50 ವರ್ಷಗಳಿಂದ ತಮ್ಮ ಸಾರ್ಥಕ ಸೇವೆಯನ್ನು ಸಲ್ಲಿಸುತ್ತಿರುವ À ಮಾಧವ ಮಹಾಬಲೇಶ್ವರ ಜಾಲಿಸತ್ಗ್ನಿ ನಡೆದ ಬೇಂಕಿನ ವಾರ್ಷಿಕ ಸರ್ವಸಾಧಾರಣ ಸಭೆಯ ನಂತರ ಬ್ಯಾಂಕಿನ ನಿರ್ದೇಶಕ ಮಂಡಲ, ಸಿಬ್ಬಂದಿ ವರ್ಗ ಹಾಗೂ ಬ್ಯಾಂಕಿನ ಸಮಸ್ತ ಶೇರು ಸದಸ್ಯರ ವತಿಯಿಂದಸನ್ಮಾನಿಸಲಾಯಿತು.
ಕಳೆದ 55 ವರ್ಷಗಳಿಂದ ಹೊನ್ನಾವರದಲ್ಲಿ ಪ್ರತಿಷ್ಠಿತ ವಕೀಲರಾಗಿ ತಮ್ಮ ವೃತ್ತಿ ನಡೆಸುತ್ತಾ, ಹೊನ್ನಾವರ ಬಾರ್ ಅಸೋಸಿಯೇಷನ್ ಅಧ್ಯಕ್ಷ8 ವರ್ಷ ಕೆಲಸ ಮಾಡಿದ್ದಾರೆ. ಕಳೆದ 50 ವರ್ಷಗಳಿಂದ ಹೊನ್ನಾವರ ಅರ್ಬನ್ ಬ್ಯಾಂಕಿನಲ್ಲಿ ನಿರ್ದೇಶಕರಾಗಿ ಆ ಪೈಕಿ ಕೆಲ ಅವಧಿ ಉಪಾಧ್ಯಕ್ಷರಾಗಿ ನಿರಂತರ ಸೇವೆ ಸಲ್ಲಿಸುತ್ತ ಬಂದಿರುತ್ತಾರೆ. ಹೊನ್ನಾವರ ಮುನ್ಸಿಪಾಲ್ ಕೌನ್ಸಿಲರ ಆಗಿ ಒಂದು ಅವಧಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಹೊನ್ನಾವರ ರೋಟರಿ ಕ್ಲಬ್ನ ಕಾರ್ಯದರ್ಶಿಯಾಗಿ ಹಾಗೂ ಎಂ. ಪಿ. ಇ. ಸೊಸೈಟಿ ಹೊನ್ನಾವರ À ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
ಸದರ ಸನ್ಮಾನ ಕಾರ್ಯಕ್ರಮದಲ್ಲಿ ಬೇಂಕಿನ ಹಿರಿಯ ನಿರ್ದೇಶಕ ಡಿ. ಎ. ಕಾಮತ ಎಮ್. ಎಮ್. ಜಾಲಿಸತ್ಗಿ ರವರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಉಪಾಧ್ಯಕ್ಷ ಗಣಪತಿ ವಿಷ್ಣು ನಾಯ್ಕು ಮಾಲಾರ್ಪಣೆ ಮಾಡಿದರು. ನಿರ್ದೇಶಕ ವೈಕುಂಠ ಪ್ರಭು ಫಲ ತಾಂಬೂಲ ನೀಡಿ ಗೌರವಿಸಿದರು. ನಿರ್ದೇಶಕ ್ರ ವಸಂತ ಪ್ರಭುು ನೆನಪಿನ ಕಾಣಿಕೆ ನೀಡಿದರು ಹಾಗೂ ಬೇಂಕಿನ ಅಧ್ಯಕ್ಷ್ರೀ ರಾಘವ ಬಾಳೇು ಸನ್ಮಾನ ಪತ್ರ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಸನ್ಮಾನಿತ ಜಾಲಿಸತ್ಗಿರವರ ಬಗ್ಗೆ ಬೇಂಕಿನ ಅಧ್ಯಕ್ಷ ರಾಘವ ಬಾಳೇರಿ, ಉಪಾಧ್ಯಕ್ಷ ಗಣಪತಿ ನಾಯ್ಕ, ನಿರ್ದೇಶಕೀ ಡಿ. ಎ. ಕಾಮತ, ವಸಂತ ಕರ್ಕಿಕರ ಹಾಗೂ ಪ್ರಧಾನ ವ್ಯವಸ್ಥಾಪಕ ರಾಜೀವ ಶ್ಯಾನಭಾU Àಮಾತನಾಡಿದರು. ಬೇಂಕಿನ ಶೇರು ಸದಸ್ಯ ಜಿ.ಎಸ್.ರೇವಣಕರ, ಹುಸೇನ ಖಾದ್ರೀ ದುರ್ಗಯ್ಯ ಮಂಗಲದಾಸ ನಾಯ್ಕ ಮಾತನಾಡಿದರು.
್ಲ ಸನ್ಮಾನಿತ ಎಮ್. ಎಮ್. ಜಾಲಿಸತ್ಗಿು ಸಭೆಯನ್ನು ಉದ್ದೇಶಿಸಿ ಮಾತನಾಡಿ À್ತ ತಾನು ತನ್ನ ಬ್ಯಾಂಕಿನ ನಿರ್ದೇಶಕತ್ವದ ಸೇವಾ ಅವದಿಯಲ್ಲಿ ಬ್ಯಾಂಕಿನ ಹಿತಾಸಕ್ತಿಗೇ ಪ್ರಾತಿನಿಧ್ಯ ನೀಡಿದ್ದೇನೆ ಮತ್ತು ಬ್ಯಾಂಕು ತನ್ನ ಸೇವಾ ಅವಧಿಯಲ್ಲಿ ಗುಣಮಟ್ಟ ಕಾದುಕೊಂಡು ಇಷ್ಟು ಬೆಳೆದದ್ದು ನನಗೆ ತುಂಬಾ ಸಂತೋಷವಾಗಿದೆ ಹಾಗೂ ಮುಂದಿನ ದಿನಗಳಲ್ಲಿ ಬ್ಯಾಂಕು ಮತ್ತು ಹೆಚ್ಚಿನ ಪ್ರಗತಿ ಸಾಧಿಸಲಿ ಎಂತ ಹಾರೈಸಿದರು.
ಬೇಂಕಿನ ಸಹಾಯಕ ಕಾರ್ಯನಿರ್ವಾಹಕ ಸುಬ್ರಹ್ಮಣ್ಯ ಭಟ್ಟ ಬುರ್ಡೇ ಕಾರ್ಯಕ್ರಮ ನಿರ್ವಹಿಸಿದರು.
Leave a Comment