ಹೊನ್ನಾವರ:
ತಾಲೂಕಿನ ಶ್ರೀ ಚೆನ್ನಕೇಶವ ಪೌಢಶಾಲೆಯಲ್ಲಿ ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣಕ್ಕಾಗಿ ದಾನಿಗಳಿಂದ ಕೊಡಮಾಡಿದ ಕಂಪ್ಯೂಟರ್, ಸಮವಸ್ತ್ರ ಮತ್ತು ಸರಕಾರದಿಂದ ನೀಡಲ್ಪಟ್ಟ ಸೈಕಲ್ಲನ್ನು ಸಾಂಕೇತಿಕವಾಗಿ ಹಸ್ತಾಂತರಿಸುವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಲ್ಪಟ್ಟಿತು.
ಜಿಲ್ಲಾ ಪಂಚಾಯತ್ ಸದಸ್ಯ ಶಿವಾನಂದ ಹೆಗಡೆ ಸಮಾರಂಭವನ್ನು ವಿದ್ಯುಕ್ತವಾಗಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಸೂಕ್ತವಾದ ಗುರಿ ಮತ್ತು ಗುರುವನ್ನು ಆಯ್ಕೆ ಮಾಡಿಕೊಂಡು ಬದುಕಿನ ದೀಪವನ್ನು ಬೆಳಗಿಸಿಕೊಳ್ಳಲು ಹಂಬಲಿಸಬೇಕು. ವಿದ್ಯೆ ಸಂಪಾದನೆಗೆ, ಪ್ರತಿಭೆಯ ಅನಾವರಣಕ್ಕೆ ಎಲ್ಲಾ ರೀತಿಯಲ್ಲಿ ಕಲ್ಪಿಸಿದ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಎಂದರು.
ರೋಟರಿ ಕ್ಲಬ್ ಹೊನ್ನಾವರದವರು ಸುಮಾರು 70,000/- ಮೊತ್ತದ ಕಂಪ್ಯೂಟರ್, ಪ್ರೊಜೆಕ್ಟರನ್ನು ಶಾಲೆಗೆ ದಾನವಾಗಿ ರೋಟರಿ ಮಾಜಿ ಅಧ್ಯಕ್ಷ ವಿ.ಜಿ.ನಾಯ್ಕ ಆಡಳಿತ ಮಂಡಳಿಯ ಅಧ್ಯಕ್ಷರಿಗೆ ಹಸ್ತಾಂತರಿಸಿ ಶುಭ ಹಾರೈಸಿದರು. ಕರ್ಕಿಯ ಸೇತುಬಂಧ ಟ್ರಸ್ಟ ವತಿಯಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಒಂದು ಜೊತೆ ಸಮವಸ್ತ್ರವನ್ನು ಸಾಂಕೇತಿಕವಾಗಿ ಟ್ರಸ್ಟನ ಕಾರ್ಯದರ್ಶಿ ಜಿ.ಎಚ್. ನಾಯ್ಕ ವಿತರಿಸಿ ಟ್ರಸ್ಟನ ಧ್ಯೇಯೋದ್ದೇಶಗಳನ್ನು ಸಭೆಗೆ ತಿಳಿಸಿದರು.
ತಾಲ್ಲೂಕು ಪಂಚಾಯತದ ಸದಸ್ಯ ತುಕಾರಾಮ ನಾಯ್ಕ, ಗ್ರಾಮ ಪಂಚಾಯತÀ ಅಧ್ಯಕ್ಷ ಶ್ರೀಕಾಂತ ಮೊಗೇರ ಸರಕಾರಿ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಗುಣಮಟ್ಟದ ಶಿಕ್ಷಣ ಪಡೆಯುವಂತಾಗಲಿ ಎಂದರು.
ಅಧ್ಯಕ್ಷತೆವಹಿಸಿದ ಸಂಸ್ಥೆಯ ಅಧ್ಯಕ್ಷ ಕೃಷ್ಣಮೂರ್ತಿ ಹೆಬ್ಬಾರ ಮಾತನಾಡಿ ಬದುಕಿನ ಹಾದಿಯಲ್ಲಿ ಓಡುವ ಮೊದಲು ನಡಿಗೆಯಲ್ಲಿ ಸಾಮಥ್ರ್ಯ ಪಡೆಯಬೇಕು. ಅಂತೆಯೇ ಜೀವನದ ಪ್ರತಿ ಹೆಜ್ಜೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಮುಂದುವರಿಯಲು ಕೌಶಲಯುತ ಶಿಕ್ಷಣ ಅಗತ್ಯ ಎಂದರು. ಬೀಳದೇ ಬಾಳಲು ಸಾಧ್ಯವಾಗುವುದಿಲ್ಲವಂತೆ, ಜೀವನದ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ಬದುಕನ್ನು ಹಸನಾಗಿಸಿಕೊಳ್ಳಿ ಎಂದರು.
ಶಾಲೆಯ ಮುಖ್ಯಾಧ್ಯಾಪಕ ಎಲ್. ಎಮ್.ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು.
ಗ್ರಾಮ ಪಂಚಾಯತ ಸದಸ್ಯ ನಾಗರಾಜ ಗೌಡ, ಮಹಾಬಲೇಶ್ವರ ಮೇಸ್ತ, ಜಿ. ಕೆ. ಶೇಟ್, ಮಾದೇವಿ ಮುಕ್ರಿ, ಶಿವಿ ಮುಕ್ರಿ ಉಪಸ್ಥಿತರಿದ್ದರು. ಶ್ರೀಕಾಂತ ಹಿಟ್ನಳ್ಳಿ ಕಾರ್ಯಕ್ರಮ ನಿರೂಪಿಸಿದರು. ಜಿ.ಕೆ. ಭಟ್ಟ ವಂದಿಸಿದರು.
Leave a Comment