ಹೊನ್ನಾವರ;ತಾಲೂಕಿನ ಶ್ರೀ ಚೆನ್ನಕೇಶವ ಪ್ರೌಢಶಾಲೆ ಕರ್ಕಿಯಲ್ಲಿ ಸೇವಾ ಭಾರತಿ ಟ್ರಸ್ಟ ಕುಮಟಾ ಹಾಗೂ ಕೆನರಾ ಹೆಲ್ತ್ ಕೇರ್ ಸೆಂಟರ್ನ ಪ್ರಾಯೋಜಕತ್ವದಲ್ಲಿ “ರಕ್ತ ಹೀನತೆ” ಎಂಬ ವಿಷiÀುದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಕೆನರಾ ಹೆಲ್ತ್ ಕೇರ್ ಸಂಸ್ಥೆಯ ಖ್ಯಾತ ವೈದ್ಯರು, ಸ್ತ್ರೀ ರೋಗ ತಜ್ಞರಾದ ಡಾ// ಜಿ. ಜಿ. ಹೆಗq Éಮಾತನಾಡಿ ಶಾಲೆಯ ಎಲ್ಲಾ ಮಕ್ಕಳ ಆರೊಗ್ಯ ತಪಾಸಣೆ ನಡೆಸಿ, ರಕ್ತಹೀನತೆ ಇರುವ ವಿದ್ಯಾರ್ಥಿನಿಯರನ್ನು ಗುರುತಿಸಿ, ಅಜ್ಞಾನದ ಕಣ್ಣನ್ನು ತೆರೆದು, ವ್ಶೆಜ್ಞಾನಿಕ ದೃಷ್ಠಿಯಲ್ಲಿ ಆಲೋಚಿಸಿ ಸೂಕ್ತ ಸಮಯದಲ್ಲಿ ವೈದ್ಯರ ಸಲಹೆ ಪಡೆದಾಗ ರಕ್ತಹೀನತೆ ದೂರವಾಗಬಹುದು ಎಂದು ಹೇಳಿದರು. ರಕ್ತಹೀನತೆಗೆ ಕಾರಣವಾದ ಅಂಶಗಳು ಹಾಗೂ ಅದನ್ನು ತಡೆಗಟ್ಟುವ ಕ್ರಮಗಳ ಕುರಿತು ವಿದ್ಯಾರ್ಥಿಗಳ ಮನತಟ್ಟುವಂತೆ ತಿಳಿಸಿ . ಮಕ್ಕಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡು ಮಕ್ಕಳ ಸಂದೇಹಗಳಿಗೆ “ಮಕ್ಕಳಿಲ್ಲದೇ ಇರುವವರು ಸಮಾಜದ ಮಕ್ಕಳನ್ನು ತಮ್ಮ ಮಕ್ಕಳಂತೆ ಕಾಣಬೇಕು” ಎಂದುರು.
ಶ್ರೀ ಚೆನ್ನಕೇಶವ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಹಾಗೂ ಕಾರ್ಯಕ್ರಮದ ಅಧ್ಯಕ್ಷರಾದ ಕೃಷ್ಣಮೂರ್ತಿ ಹೆಬ್ಬಾರ ಮಾತನಾಡಿ ಡಾ// ಜಿ.ಜಿ.ಹೆಗಡೆ ಯವರು ಖ್ಯಾತವೈದ್ಯರಾಗಿದ್ದು ತಮ್ಮ ವೃತ್ತಿಯನ್ನು ಮೀಸಲಿಟ್ಟು ನಿಸ್ವಾರ್ಥ ಸೇವೆಯನ್ನು ನೀಡುತ್ತಿದ್ದಾರೆ ಎಂದುರು.
ಶಾಲೆಯ ಮುಖ್ಯೋಪಾಧ್ಯಾಯರಾದ À ಎಲ್. ಎಮ್. ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು
ಕಾರ್ಯಕ್ರಮದಲ್ಲಿ ಎಫ್.ಪಿ.ಎ ಸಂಸ್ಥೆಯ ವ್ಯವಸ್ಥಾಪಕರಾದ ಸಂತನ್ ಲೂಯಿಸ್ ಉಪಸ್ಥಿತರಿದ್ದರು. À ಶ್ರೀಕಾಂತ ಹಿಟ್ನಳ್ಳಿ ವಂದಿಸಿದರು. ಸೀಮಾ ಭಟ್ಟ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲೆಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
Leave a Comment