ಕಾರವಾರ:
ಅಕ್ರಮವಾಗಿ ಸಾಗಿಸುತ್ತಿದ್ದ 28 ಸಾವಿರ ರು ಮೌಲ್ಯದ ಗೋವಾ ಮದ್ಯ ಹಾಗೂ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದ ಘಟನೆ ತಾಲೂಕಿನ ಮುಡಗೇರಿಯಲ್ಲಿ ಶುಕ್ರವಾರ ನಡೆದಿದೆ.
ಹೋಟೆಗಾಳಿಯ ಕೃಷ್ಣ ರಾಮ ಗಜನ್ಕರ್ ಬಂದಿತ ಆರೋಪಿ, ಇನ್ನೂಳಿದ ಪ್ರಮೋದ ಪಡುವಳಕರ್, ಘಾಡಸಾಯಿ ಸತೀಶ್ ನಾಯ್ಕ, ವೈಂಗಿಣಿಯ ಮಧು ಗಾಂವಕರ್ ಎಂಬ ಮೂವರು ಪರಾರಿಯಾಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಗೋವಾದಿಂದ ಮುಡಗೇರಿ ಡ್ಯಾಮ್ ಬಳಿ ಸಾಗಿಸುತ್ತಿದ್ದ ಗೋವಾ ಮದ್ಯ ಹಾಗೂ ಸಾಗಾಟಕ್ಕೆ ಬಳಸಿದ್ದ ಒಂದು ದ್ವೀಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಚಿತ್ತಾಕುಲ ಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment