ಕಾರವಾರ:
ತಾಲೂಕಿನ ಮೂಡಗೇರಿಯ ಡ್ಯಾಂ ಸಮೀಪ ಅಕ್ರಮ ಗೋವಾ ಮದ್ಯ ಸಾಗಿಸುತ್ತಿದ್ದ ಯುವಕನನ್ನು ಚಿತ್ತಾಕುಲ ಪೊಲೀಸರು ಬಂಧಿಸಿದ್ದಾರೆ.
ಹೋಟೆಗಾಳಿ ನಿವಾಸಿ ಕೃಷ್ಣ ಗಜನೀಕರ್ ಬಂಧಿತ ಆರೋಪಿ. ಈತನು ತನ್ನ ಮೂವರು ಸ್ನೇಹಿತ ಜೊತೆಗೆ ಬೈಕ್ನಲ್ಲಿ ಅಕ್ರಮ ಗೋವಾ ಮದ್ಯ ಸಾಗಿಸುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ಚಿತ್ತಾಕುಲ ಪೊಲೀಸರು ದಾಳಿ ನಡೆಸಿ, 28700 ರೂ. ಮೌಲ್ಯದ ಗೋವಾ ಮದ್ಯದ ಜೊತೆಗೆ ಕಳ್ಳ ಸಾಗಾಣಿಕೆಗೆ ಬಳಸಲಾದ ಬೈಕ್ನ್ನು ವಶಕ್ಕೆ ಪಡೆಯಲಾಗಿದೆ. ಕೃಷ್ಣನನ್ನು ಬಂಧಿಸಿದ ಪೊಲೀಸರು ಪರಾರಿಯಾದ ಸತೀಶ ನಾಯ್ಕ, ಪ್ರಮೋದ ಪಡುವಳಕರ್ ಮತ್ತು ಮಧು ಗಾಂವ್ಕರ್ನನ್ನು ಬಂಧಿಸಲು ಶೋಧ ಕಾರ್ಯಾಚರಣೆ ನಡೆಸಲಾಗಿದೆ.
Leave a Comment