ಹೊನ್ನಾವರ :-
ಸಾಮಾಜಿಕ ನ್ಯಾಯ ಕಾಂಗ್ರೇಸ್ ಪಕ್ಷದ ಮತ್ತು ಕರ್ನಾಟಕ ಸರ್ಕಾರದ ಪ್ರಥಮ ಆದ್ಯತೆಯಾಗಿದ್ದು, ನೊಂದವರ-ಸಮಾಜದಲ್ಲಿ ತುಳಿತಕ್ಕೊಳಗಾದವರ ಹಾಗೂ ಅವಕಾಶ ವಂಚಿತರಾದ ಜನತೆಯ ಒಳಿತಕ್ಕಾಗಿ ಕಾಂಗ್ರೇಸ್ ಸರ್ಕಾರ ರೂಪಿಸಿರುವ ಜನಮುಖಿ ಯೋಜನೆಗಳ ಅನುಷ್ಟಾನದಲ್ಲಿ ಕಾಂಗ್ರೇಸ್ ಪಕ್ಷ ಸದಾ ಕಾಳಜಿ ವಹಿಸುತ್ತಾ ಬಂದಿದೆ ಮತ್ತು ಈ ಯೋಜನೆಗಳು ಬಡವರ ಬದುಕಿನಲ್ಲಿ ಬರವಸೆಗಳನ್ನು ಮೂಡಿಸಿವೆ ಎಂದು ಕಾಂಗ್ರೇಸ್ ಉಸ್ತುವಾರಿ ಮತ್ತು ಕೆ.ಪಿ.ಸಿ.ಸಿ. ಕಾರ್ಯದರ್ಶಿ ಡಾ|| ರಾಜನಂದಿನಿ ಕಾಗೋಡು ತಿಮ್ಮಪ್ಪ ಹೇಳಿದರು.
ಅವರು ಹೊನ್ನಾವರದ ಹೊಸಾಡÀದಲ್ಲಿ ನಡೆದ ಮನೆ ಮನೆ ಕಾಂಗ್ರೇಸ್ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕಳೆದ ಚುನಾವಣೆ ವೇಳೆ ಕಾಂಗ್ರೇಸ್ ಪ್ರಣಾಳಿಕೆಯಲ್ಲಿ ತಿಳಿಸಿದ ಬಹುತೇಕ ಭರವಸೆಗಳನ್ನು ಈಡೇರಿಸಿದೆ. ಕಳೆದ 4 ವರ್ಷಗಳ ಅವಧಿಯಲ್ಲಿ ರಾಜ್ಯದ 5 ಕೋಟಿ ಜನರಿಗೆ ಒಂದಲ್ಲ ಒಂದು ರೀತಿಯಲ್ಲಿ ಸರ್ಕಾರ ನೆರವಾಗಿದೆ.ಕಾಂಗ್ರೇಸ್ ಪಕ್ಷ ನುಡಿದಂತೆ ನಡೆದಿದೆ. ಸರ್ಕಾರದ ಸಾಧನೆಗಳನ್ನು ರಾಜ್ಯದೆಲ್ಲಡೆ ಮನೆ ಮನೆಗೆ ತಲುಪಿಸುವ ಉದ್ದೇಶದಿಂದ ರಾಜ್ಯದಾದ್ಯಂತ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಚಂದ್ರಶೇಖರ ಗೌಡ ಮಾತನಾಡಿ ಭಟ್ಕಳ ವಿಧಾನಸಬಾ ಕ್ಷೇತ್ರಗಳಲ್ಲಿ ಜನ ಸಂಪರ್ಕವೇ ಇಲ್ಲದ ಅನೇಕ ದ್ವೀಪಗಳಿಗೆ ಗ್ರಾಮೀಣ ಪ್ರದೇಶದಲ್ಲಿ ನೂರಾರು ಕೋಟಿ ವೆಚ್ಚದಲ್ಲಿ ಹಲವು ಸೇತುವೆಗಳನ್ನು ನಿರ್ಮಿಸಲು ಕ್ರಮ ಕೈಗೊಂಡಿದೆ. ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಹಿಂದೆಂದೂ ಆಗದಷ್ಟು ಅಭಿವೃದ್ದಿ ಕೆಲಸಗಳನ್ನು ಈ ಭಾಗದಲ್ಲಿ ತರಲು ಶಾಸಕ ಮಂಕಾಳು ವೈದ್ಯ ಸಾಕಷ್ಟು ಶ್ರಮ ವಹಿಸಿದ್ದಾರೆ. ಸರಕಾರದ ರೈತರ ಸಾಲ ಮನ್ನಾ ಮತ್ತು ಉಚಿತ ಅಕ್ಕಿ ವಿತರಣೆ ಕಾರ್ಯಕ್ರಮವು ಈ ಕ್ಷೇತ್ರದ ಜನರಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದು ಕಾಂಗ್ರೇಸ್ ಸರ್ಕಾರದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ. ವಿದ್ಯಾಸಿರಿ ಯೋಜನೆಯು ಗ್ರಾಮೀಣ ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿದ್ದು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ ಎಂದರು
ಜಿಲ್ಲಾ ಕಾಂಗ್ರೇಸ್ ಸಮಿತಿಯ ಚಂದ್ರಕಾಂತ ಕೊಚರೇಕರ್ . ಕೆ.ಪಿ.ಸಿ.ಸಿ ಸದಸ್ಯ ವಿನೊದ ನಾಯ್ಕ ಹಳದಿಪುರ, ಜಿ.ಪಂ. ಮಾಜಿ ಉಪಾಧ್ಯಕ್ಷೆ ವನಿತಾ ನಾಯ್ಕ ಮಂಕಿ, ಮಾಜಿ ಜಿ.ಪಂ. ಸದಸ್ಯ ಕೃಷ್ಣ ಗೌಡ ಮುಂತಾದವರು ಸಭೆಯನ್ನು ಉದ್ದೇಶಿಸಿ ಮಾತನಡಿದರು.
ಕಾರ್ಯಕ್ರಮದಲ್ಲಿ ತಾ.ಪಂ. ಅಧ್ಯಕ್ಷ ಉಲ್ಲಾಸ ನಾಯ್ಕ, ಕೃಷಿ ಬ್ಯಾಂಕ್ ಅದ್ಯಕ್ಷ ಯೋಗೇಶ ರಾಯ್ಕರ್ ಉಪ್ಪೋಣಿ, ತಾ.ಪಂ ಸದಸ್ಯ ಲೋಕೇಶ ನಾಯ್ಕ, ಅಣ್ಣಯ್ಯ ನಾಯ್ಕ, ಗ್ರಾ.ಪಂ. ಅಧ್ಯಕ್ಷÀ ರಾಜೇಶ್ವರಿ ನಾಯ್ಕ ಅಳ್ಳಂಕಿ, ಈಶ್ವರ ನಾಯ್ಕ ಕುದ್ರಿಗಿ, ಸುಬ್ರಾಯ ನಾಯ್ಕ ಬಳ್ಕೂರ, ಗೋವಿಂದ ನಾಯ್ಕ, ರಾಘು ನಾಯ್ಕ ಗೇರುಸೊಪ್ಪಾ, ದೇವರಾಯ ನಾಯ್ಕ ಜಲವಳ್ಳಿ, ಶಿರಿ ನಾಯ್ಕ ಖರ್ವಾ, ಜೂಜೆ ರೋಡ್ರಗೀಸ್ ಕಾಸರಕೋಡ, ಕಿಸಾನ್ ಸೇಲ್ ಅದ್ಯಕ್ಷ ಅಣ್ಣಪ್ಪ ನಾಯ್ಕ ಮಂಕಿ ಮುಂತಾದವರು ಉಸ್ಥಿತರಿದ್ದರು. ಹೊಸಾಡ ಘಟಕದ ಅಧ್ಯಕ್ಷ ಹನ್ಮಂತ ಗೌಡ ಸ್ವಾಗತಿಸಿದುರು , ಯುವ ಕಾಂಗ್ರೇಸಿನ ಕಿಟ್ಟಿ ಗೌಡ ವಂದಿಸಿದರು.
Leave a Comment