ಕಾರವಾರ:
ಅಮದಳ್ಳಿಯಲ್ಲಿ ಬ್ರಹ್ಮದೇವ ಯುವಕ ಸಂಘದ ವತಿಯಿಂದ ದುರ್ಗಾದೇವಿ ಉತ್ಸವದ ಅಂಗವಾಗಿ ನಡೆದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಸ್ಪರ್ಧಿಗಳು ಉತ್ಸಾಹದಿಂದ ಭಾಗವಹಿಸಿದ್ದರು.
ಈ ಕ್ರೀಡಾಕೂಟದಲ್ಲಿ ಮಕ್ಕಳು, ಮಹಿಳೆಯರು, ಪುರುಷರು ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಕೆಸರುಗದ್ದೆ ಓಟ, ಮಕ್ಕಳು ಹಾಗೂ ಮಹಿಳೆಯರಿಗಾಗಿ ಲಿಂಬು ಚಮಚ ಓಟ, ಕೊಡ ಹೊತ್ತುಕೊಂಡು ಓಡುವುದು, ಹಗ್ಗ ಜಗ್ಗಾಟ, ಕಬ್ಬಡ್ಡಿ, ಥ್ರೋ ಬಾಲ್ ಸೇರಿದಂತೆ ನಾನಾ ಬಗೆಯ ಕ್ರೀಡೆಗಳಲ್ಲಿ ಜನ ಭಾಗವಹಿಸಿದ್ದರು. ಕಳೆದ ಹತ್ತು ವರ್ಷಗಳಿಂದ ಪ್ರತಿವರ್ಷ ದುರ್ಗಾದೇವಿಯನ್ನ ಪ್ರತಿಷ್ಠಾಪಿಸಿ ನವರಾತ್ರಿ ಉತ್ಸವ ಆಚರಿಸಲಾಗುತ್ತಿದೆ. ಇಲ್ಲಿ ನಶಿಸಿ ಹೋಗುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸಲು ಕೆಸರುಗದ್ದೆ ಕ್ರೀಡಾಕೂಟವನ್ನು ನಡೆಸಲಾಗುತ್ತಿದೆ. ಜಿಲ್ಲಾ ಕಾರ್ಯನಿರತ ಪತ್ರಕರ್ತಕರ್ತರ ಸಂಘದ ಅಧ್ಯಕ್ಷ ಟಿ.ಬಿ ಹರಿಕಂತ್ರ ಭೂಮಿ ಪೂಜೆ ಮಾಡುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಾನಪದ ಅಕಾಡೆಮಿ ಸದಸ್ಯ ಪುರುಷೋತ್ತಮ ಗೌಡ, ಅಮದಳ್ಳಿ ಗ್ರಾ.ಪಂ.ಸದಸ್ಯ ಶ್ರೀಧರ ತಳೇಕರ, ಜಿಲ್ಲಾ ಯುವ ಪ್ರಶಸ್ತಿ ವಿಜೇತ ಮಂಜುನಾಥ ಮುದ್ಗೇಕರ, ಬ್ರಹ್ಮದೇವ ಯುವಕ ಮಂಡಳದ ಅಧ್ಯಕ್ಷ ಜ್ಞಾನೇಶ್ವರ ಗೌಡ ವೇದಿಕೆಯಲ್ಲಿದ್ದರು.
Leave a Comment