ಹಳಿಯಾಳ:
ಬಂಗಾಲ ರಾಜ್ಯದಲ್ಲಿ ಮೊಹರಮ್ ನಿಮಿತ್ತ ನವರಾತ್ರಿಯಲ್ಲಿ “ಶ್ರೀ ದುರ್ಗಾ ವಿಸರ್ಜನೆ”ಗೆ ನಿರ್ಭಂದ ಹೆರಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ಕ್ರಮ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡುತ್ತದೆ ಕಾರಣ ದುರ್ಗಾ ವಿಸರ್ಜನೆಗೆ ಹೇರಿರುವ ನಿರ್ಭಂದವನ್ನು ತಕ್ಷಣ ತೆಗೆದುಹಾಕಿ ಧರ್ಮಾದಾರಿತ ರಾಜಕಾರಣ ಮಾಡುವುದನ್ನು ಮಮತಾ ಬ್ಯಾನರ್ಜಿ ಅವರು ಬಿಡಬೇಕೆಂದು ಹಿಂದೂ ಜನಜಾಗೃತಿ ಸಮಿತಿ ಹಾಗೂ ರಾಷ್ಟ್ರೀಯ ಹಿಂದೂ ಆಂದೋಲನ ಸಮೀತಿ ಆಗ್ರಹಿಸಿದೆ.
ಈ ಕುರಿತು ಕೇಂದ್ರ ಗೃಹ ಮಂತ್ರಿ ರಾಜನಾಥಸಿಂಗ್ ಅವರಿಗೆ ಬರೆದ ಮನವಿ ಪತ್ರವನ್ನು ಹಳಿಯಾಳ ತಹಶೀಲ್ದಾರ್ ಅವರಿಗೆ ಸಲ್ಲಿಸಿರುವ ಸಮೀತಿಯವರು ಬಂಗಾಲ ಸರ್ಕಾರದ ಕ್ರಮಕ್ಕೆ ತೀವೃ ಖಂಡನೆ ವ್ಯಕ್ತಪಡಿಸಿದ್ದಾರೆ.
ಮನವಿಯಲ್ಲಿ :- ಶ್ರೀದುರ್ಗಾ ಪೂಜೆ ಹಾಗೂ ವಿಸರ್ಜನೆಯಿಂದ ಯಾರಿಗೂ ತೊಂದರೆಯಾಗಿಲ್ಲ ಅಥವಾ ಅದರಿಂದ ಸಮಾಜದಲ್ಲಿ ಯಾವುದೇ ಪ್ರಕಾರದ ಕಾನೂನು ಸುವ್ಯವಸ್ಥೆಗೆ ಅಡಚಣೆಯಾಗಿಲ್ಲ. ಆದರೂ ಮಮತಾ ಸರಕಾರ ಈಗ ಮೊಹರಮ್ನ ನೆಪದಲ್ಲಿ ಈ ವರ್ಷ ಶ್ರೀ ದುರ್ಗಾ ಮೂರ್ತಿ ವಿಸರ್ಜನೆಗೆ ಒಂದು ದಿನದ ನಿರ್ಬಂಧ ಹೇರಿದೆ. ಈ ರೀತಿ ಮುಸಲ್ಮಾನರ ಹಬ್ಬಕ್ಕಾಗಿ ಹಿಂದೂಗಳ ಉತ್ಸವಕ್ಕೆ ನಿರ್ಬಂಧ ಹೇರುವುದು, ಧಾರ್ಮಿಕ ಪಕ್ಷಪಾತವಾಗುತ್ತದೆ ಎಂದು ಆರೋಪಿಸಲಾಗಿದ್ದು ಕೂಡಲೇ ಕೇಂದ್ರ ಸರಕಾರವು ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಿ ಶ್ರೀದುರ್ಗಾ ಮೂರ್ತಿ ವಿಸರ್ಜನೆಗೆ ಹಾಕಿದ ನಿರ್ಬಂಧವನ್ನು ತಕ್ಷಣ ತೆರವುಗೊಳಿಸಬೇಕು ಹಾಗೂ ಮಮತಾ ಸರಕಾರಕ್ಕೆ ಇದರ ಬಗ್ಗೆ ಸ್ಪಷ್ಟೀಕರಣ ಕೇಳಬೇಕೆಂದು ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಹಿಂದು ಜನಜಾಗೃತಿ ಸಮಿತಿಯ ವಿಠೋಬಾ ಮಾಳ್ಸೇಕರ, ಶಂಕರ ರೇಣಕೆ, ಅಪ್ಪಾಜಿ ಶಹಾಪೂರಕರ, ವಿನೋದ ಗಿಂಡೆ, ಧರ್ಮರಾಜ ಪಾಟೀಲ, ಸುರೇಶ ಶಿವಣ್ಣವರ, ಅಭಿಷೇಕ ಮಸೂರಕರ, ಪದ್ಮಾ ಧೂಳಿ, ಶಾಂತಿನಾಥ ಕರಡಿ ಹಾಗೂ ಇನ್ನಿತರ ಸಂಘಟನೆಗಳ ಕಾರ್ಯಕರ್ತರು ಇದ್ದರು.
Leave a Comment