ಕಾರವಾರ:
ಬಿಣಗಾದ ಬಾಲ ಭವನ ಇಂಗ್ಲಿಷ್ ಮಿಡಿಯಂ ಶಾಲೆಯಲ್ಲಿ ಬುಧವಾರ ಶಾರದಾ ಪೂಜೆ ನಡೆಯಿತು.
ಪೂಜೆ ಅಂಗವಾಗಿ ದೇವಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಮಕ್ಕಳಿಗೆ ವಿದ್ಯೆ ಬುದ್ದಿ ನೀಡುವಂತೆ ದೇವರಲ್ಲಿ ಪ್ರಾರ್ಥಿಸಿ ದೇವಿಯನ್ನು ಆರಾಧಿಸಲಾಯಿತು. ಶಿಕ್ಷಕರಾದ ಲೇಕೇಶ್ ಬಿಣಗೇಕರ್, ಪ್ರಿಯಾ ಫರ್ನಾಂಡಿಸ್, ಎನ್.ಜಿ ನಾಯ್ಕ ಉಸ್ತುವಾರಿ ವಹಿಸಿದ್ದರು. ಆದಿತ್ಯ ಬಿರ್ಲಾ ಗ್ರೂಪ್ನ ಇಲ್ಲಿನ ಎಚ್.ಆರ್ ಎಸ್.ಕೆ ಭಟ್ಟ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಾಲ ಭವನ ಕಾರ್ಯದರ್ಶಿ ಸಿ.ಎಂ ನಾಯ್ಕ ಕಾರ್ಯಕ್ರಮ ಸಂಘಟಿಸಿದ್ದರು.
Leave a Comment