ಹೊನ್ನಾವರ:”ಕವಿಯ ಅಂತರಂಗದ ಧ್ವನಿಯಾಗದೆ ಅವಾಸ್ತವಿಕವಾಗಿರುವ ಹೆಚ್ಚಿನ ಕವಿತೆಗಳು ಕವಿ ತಾನು ಬಹಿರಂಗದಲ್ಲಿ ಪ್ರತಿಪಾದಿಸುವ ಅಪ್ರಮಾಣಿಕ ಮೌಲ್ಯಗಳ ಜಾಹೀರಾತಿನಂತೆ ಕಂಡು ಬರುತ್ತವೆ’ ಎಂದು ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ.ಪಿ.ಕಣ್ಣನ್ ಅಭಿಪ್ರಾಯಪಟ್ಟರು.
ಇಲ್ಲಿಯ ಎಸ್.ಡಿ.ಎಂ. ಪದವಿ ಕಾಲೇಜಿನ ಇಂಗ್ಲಿಷ್ ಲಿಟರರಿ ಕ್ಲಬ್ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ “ಸಾಹಿತ್ಯದ ಪುನರ್ ವಾಖ್ಯಾನ’ ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು,ಹೆಚ್ಚಿನ ಕವಿಗಳು ಕಾವ್ಯದಲ್ಲಿ ತಾವು ಪ್ರತಿಪಾದಿಸುವ ಮೌಲ್ಯ ಹಾಗೂ ಸಿದ್ಧಾಂತಗಳನ್ನು ನಿಜ ಜೀವನದಲ್ಲಿ ಅಳವಡಿಕೊಳ್ಳುವುದಿಲ್ಲ’ ಎಂದು ಹೇಳಿದರು.
ವಿಮರ್ಶಾ ಸಿದ್ಧಾಂತವನ್ನು ಹುಟ್ಟು ಹಾಕಿದ ಪ್ಲೇಟೊ ಕವಿಗಳನ್ನು ಸುಳ್ಳುಗಾರರೆಂದು ಕರೆದ.ಸಿಡ್ನಿ,ಎಲಿಯಟ್,ವಡ್ರ್ಸವರ್ಥ,ಅರ್ನೋಲ್ಡ್ ಸೇರಿದಂತೆ ಹಲವು ವಿಮರ್ಶಕರು ಕಾವ್ಯದ ಓದಿನ ಕುರಿತು ತಮ್ಮ ಸಿದ್ಧಾಂತ ಮಂಡಿಸಿದ್ದು ಕಾವ್ಯ ಹಾಗೂ ವಿಮರ್ಶೆ ಇತಿಹಾಸದಲ್ಲಿ ಜೊತೆ ಜೊತೆಯಾಗಿ ಸಾಗಿವೆ.
ಕಾವ್ಯ ಸಾರ್ವತ್ರಿಕ ಸತ್ಯವೆಂಬುದು ನಿಜವಲ್ಲ;ಇದು ಕೇವಲ ಕವಿಯ ಅಭಿಪ್ರಾಯ ಮಾತ್ರವಾಗಲು ಸಾಧ್ಯ.ವಿಮರ್ಶಾ ಸಿದ್ಧಾಂತಗಳು ಕಾವ್ಯವನ್ನು ಅರ್ಥೈಸುವಿಕೆಯಲ್ಲಿ ಸೋತಿವೆ.ಅಂತಿಮವಾಗಿ ಓದುಗ ಕಾವ್ಯವನ್ನು ಹೇಗೆ ಅರ್ಥಮಾಡಿಕೊಳ್ಳುತ್ತಾನೆ ಎನ್ನುವದಲ್ಲಿ ಕಾವ್ಯದ ಸೌಂದರ್ಯವಡಗಿದ್ದು ಓದುಗನ ಅಭಿಪ್ರಾಯಕ್ಕೆ ಮನ್ನಣೆ ಅಗತ್ಯ’ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಪ್ರೊ.ಎಸ್.ಎಸ್.ಹೆಗಡೆ ಮಾತನಾಡಿ,”ಅವಕಾಶಗಳು ಸಿಕ್ಕಾಗ ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಸಮಾಜಕ್ಕೆ ಅಗತ್ಯ ಕೊಡುಗೆ ನೀಡಬೇಕು’ ಎಂದು ಹೇಳಿದರು.
ಉಪನ್ಯಾಸಕಿ ಕೆ.ಆರ್.ಶ್ರೀಲತಾ,ಸ್ವರ್ಣಾ ಹೆಗಡೆ ಉಪಸ್ಥಿತರಿದ್ದರು.
ಪ್ರೊ.ಎಂ.ಜಿ.ಹೆಗಡೆ ಸ್ವಾಗತಿಸಿದರು.ವಿದ್ಯಾ,ಶಾಂಭವಿ ನಿರೂಪಿಸಿದರು.ವಿನುತಾ ನಾಯ್ಕ ವಂದಿಸಿದರು.
ವಿದ್ಯಾರ್ಥಿಗಳ ಕೈ ಬರಹ ಪತ್ರಿಕೆ “ಬ್ಲೂಮ್’ ಬಿಡುಗಡೆಗೊಳಿಸಲಾಯಿತು.ಕ್ಲಬ್ ಏರ್ಪಡಿಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.
Leave a Comment