ಹೊನ್ನಾವರ: ಕೇಂದ್ರ ಕೌಶಲ್ಯಾಭಿವೃದ್ದಿ ಹಾಗೂ ಉದ್ಯಮಶೀಲತೆ ಸಚಿವ ಅನಂತಕುಮಾರ ಹೆಗಡೆ ತಾಲೂಕಿನ ಕೆಕ್ಕಾರ ಮಠಕ್ಕೆ ಭೇಟಿ ನೀಡಿ ರಾಘವೇಶ್ವರ ಭಾರತೀ ಸ್ವಾಮೀಜಿ ಆಶಿರ್ವಾದ ಪಡೆದರು.
ಈ ವೇಳೆ ನೂತನ ಸಚಿವರಿಗೆ ಶ್ರೀಗಳು ಶಾಲು ಹೊದಸಿ ಸನ್ಮಾನಿಸಿದರು. ಸುಮಾರು ಅರ್ಧಗಂಟೆಗಳ ಕಾಲ ವಿವಿಧ ವಿಷಯಗಳ ಬಗ್ಗೆ ಸಚಿವರು ಚರ್ಚೆ ನಡೆಸಿದರು. ಬಿಜೆಪಿ ತಾಲೂಕಾಧ್ಯಕ್ಷ ಸುಬ್ರಾಯ ನಾಯ್ಕ, ಪ್ರಮುಖರಾದ ಜಿ.ಜಿ ಹೆಗಡೆ, ನಾಗರಾಜ ನಾಯ್ಕ ತೊರ್ಕೆ, ವೆಂಕಟ್ರಮಣ ಹೆಗಡೆ, ಸುನಿಲ ನಾಯ್ಕ, ರಾಜು ಭಂಡಾರಿ ಇತರರಿದ್ದರು.
Leave a Comment