ಕಾರವಾರ:
ಟಾಟಾ ಏಸ್ವೊಂದು ಬೈಕ್ಗ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಇಲ್ಲಿನ ಕದ್ರಾ ಬಾಳ್ನಿಯಲ್ಲಿ ಶುಕ್ರವಾರ ನಡೆದಿದೆ.
ಮಲ್ಲಾಪುರದ ಹಿಂದುವಾಡದ ನಿವಾಸಿ ರವೀಂದ್ರ ಬಾಂದೇಕರ್ (41) ಮೃತಪಟ್ಟ ಬೈಕ್ ಸವಾರ. ಮೀನು ತುಂಬಿಕೊಂಡು ಬರುತ್ತಿದ್ದ ಟಾಟಾ ಏಸ್ ಕದ್ರಾದಿಂದ ಬೈತ್ಖೋಲ್ಗೆ ಬರುತ್ತಿರುವಾಗ ಈ ಅಪಘಾತ ಸಂಭವಿಸಿದೆ. ಮೃತ ಬೈಕ್ ಸವಾರದ ಶವವನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಿ, ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಕದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment