ಕಾರವಾರ:
ಸುಂಕೇರಿಯ ನಿರ್ಮಲಾ ರಾಣೆ ಸ್ಕೂಲ್ನ 9 ನೇ ತರಗತಿ ವಿದ್ಯಾರ್ಥಿ ಡೆಂಘ್ಯೂ ರೋಗದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿದ್ದಾನೆ.
ಕಡವಾಡ ನಿವಾಸಿ ಪ್ರಥಮ (13) ಎಂಬಾತ ಡೆಂಘ್ಯೂಗೆ ಬಲಿಯಾದ ವಿದ್ಯಾರ್ಥಿ. ಕೆಲ ದಿನಗಳಿಂದ ಡೆಂಘ್ಯೂ ಕಾಯಿಲೆಗೆ ತುತ್ತಾದ ಈತನು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಈ ಮಾರಕ ಕಾಯಿಲೆ ಡೆಂಘ್ಯೂ ದಿನೇ ದಿನೇ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಹರಡುತ್ತಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ ಹಣಕೋಣ, ಕಡವಾಡ ಮತ್ತು ಕದ್ರಾದ ಗ್ರಾಮಗಳ ವ್ಯಾಪ್ತಿಯಲ್ಲಿ ಐದಾರು ಡೆಂಘ್ಯೂ ಪ್ರಕರಣಗಳು ಪತ್ತೆಯಾಗಿದ್ದವು. ಆದರೂ ಆರೋಗ್ಯ ಇಲಾಖೆ ಈ ಭಾಗದಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದ್ದು, ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Leave a Comment