ಹೊನ್ನಾವರ:
ಭಾರತ ಸರ್ಕಾರ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಕಾರವಾರ ತಾಲೂಕು ಯುವ ಒಕ್ಕೂಟ ಹೊನ್ನಾವರ, ಸಂಪ್ರಭಾ ಗ್ರಾಮೀಣಾಭೀವೃದ್ಧಿ ಸಂಸ್ಥೆ (ರಿ.) ಮೂಡ್ಕಣಿ ಶ್ರೀ ಶಂಭುಲಿಂಗೇಶ್ವರ ಸಾಂಸ್ಕøತಿಕ ಹಾಗೂ ಕ್ರೀಡಾ ಸಂಘ (ರಿ.) ಮೂಡ್ಕಣಿ ಡಾ|| ಬಿ. ಆರ್. ಅಂಬೇಡ್ಕರ್ ಹಳ್ಳೇರ್ ಯುವಕ ಸಂಘ ಕೆಳಗಿನ ಮೂಡ್ಕಣಿ, ಸ್ತ್ರೀ ಶಕ್ತಿ ಹಾಗೂ ವಿವಿಧ ಮಹಿಳಾ ಸಂಘಟನೆಗಳು ಹಾಗೂ ಆಟೋ ಚಾಲಕರು ಮೂಡ್ಕಣಿ, ಇವರ ಸಹಕಾರದಲ್ಲಿ ಮೂಡ್ಕಣಿಯ ಬಸ್ ಸ್ಟ್ಯಾಂಡ್ ಆವರಣದಲ್ಲಿ ಗಾಂಧಿಜಯಂತಿಯ ಪ್ರಯುಕ್ತ ಸ್ವಚ್ಚ ಹೇ ಸೇವಾ ಕಾರ್ಯಕ್ರಮವನು ್ನನಡೆಯಿತು .
ನಂತರ ಗ್ರಾ.ಪಂ. ಸದಸ್ಯರಾದ ಗಜಾನನ ನಾಯ್ಕ ಮಾತನಾಡಿ ಪ್ರತಿಯೊಬ್ಬರೂ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು ಇದರಿಂದ ಸ್ವಚ್ಚ ಭಾರತದ ಕನಸು ನನಸಾಗಿಸಬೇಕೆಂದು ಹೇಳಿದರು. ತಾಲೂಕಾ ಯುವ ಒಕ್ಕೂಟದ ಅಧ್ಯಕ್ಷÀ ವಿನಾಯಕ ಬಿ. ನಾಯ್ಕ Â ಮಾತನಾಡಿ ಸ್ವಚ್ಚ ಭಾರತ ಯೋಜನೆಯ ಸಾಧನೆಗಳನ್ನು ಜನರಿಗೆ ತಿಳಿಸುವುದಕ್ಕಾಗಿ ಸ್ವಚ್ಚ್ ಹೇ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರಿಂದ ಮಹಾತ್ಮ ಗಾಂಧಿಯವರ ಸ್ವಚ್ಚ ಭಾರತದ ಕನಸನ್ನು ಸಾಕಾರಗೊಳಿಸಲು ಶ್ರಮದಾನದ ಮೂಲಕ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಚಗೊಳಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಯುವಕ ಸಂಘದ ಉಪಾಧ್ಯಕ್ಷರಾದ ರಾಜು ನಾಯ್ಕ ಹಾಗೂ ಡಾ|| ಬಿ. ಆರ್. ಅಂಬೇಡ್ಕರ್ ಹಳ್ಳೇರ್ ಯುವಕ ಸಂಘದ ಪದಾಧಿಕಾರಿಗಳಾದ ರಾಜು ಹಳ್ಳೇರ್, ನಾಗೇಶ ಹಳ್ಳೇರ್,ಹಾಗೂ ಮಹಿಳಾ ಸಂಘದ ಮೀನಾಕ್ಷಿ ನಾಯ್ಕ, ಸಾವಿತ್ರಿ ರಾಮ ಹಳ್ಳೇರ್, ಇನ್ನೀತರರು ಉಪಸ್ಥಿತರಿದ್ದರು.
ನಂತರ ಅಂಗನವಾಡಿ ಕೇಂದ್ರ, ಬಸ್ ನಿಲ್ದಾಣ, ಪಶು ಚಿಕಿತ್ಸಾಲಯ, ಸಮುದಾಯ ಭವನ, ಈ ಎಲ್ಲಾ ಸ್ಥಳಗಳಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.
Leave a Comment