ಹೊನ್ನಾವರ: ಕೊಂಕಣಿ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಕೊಂಕಣಿ ಅಕಾಡೆಮಿ ಮಾಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಕೊಂಕಣಿ ಭಾಷೆಯ ಸೊಗಡು ಅಪೂರ್ವವಾಗಿದೆ. ಅದನ್ನು ಉಳಿಸಿ ಬೆಳೆಸುವ ಕೆಲಸ ಅಕಾಡೆಮಿಯಿಂದ ನಡೆಯುತ್ತಿದೆ. ಅದಕ್ಕಾಗಿ ಅಕಾಡೆಮಿಗೆ ಅಭಿನಂದನೆಗಳನ್ನೂ ಸಲ್ಲಿಸುತ್ತಿದ್ದೇನೆ ಎಂದು ಹೊನ್ನಾವರ ತಾಲೂಕಾ ಪಂಚಾಯತ್ ಅಧ್ಯಕ್ಷ ಉಲ್ಲಾಸ ನಾಯ್ಕ ಹೇಳಿದರು.
ಅವರು ಗೇರಸೊಪ್ಪಾದಲ್ಲಿ “ಅಮ್ಚಿ ಕೊಂಕಣಿ” ಆಯೋಜಿಸಿದ್ದ ಕೊಂಕಣಿ ಮಾನ್ಯತೆಯ ಬೆಳ್ಳಿ ಹಬ್ಬದ ನಿಮಿತ್ತ ನಡೆದ ಕೊಂಕಣಿ ಭಾಷಾ ಕಾರ್ಯಾಗಾರದ ಉದ್ಘಾಟನೆ ನಡೆಸಿ ಮಾತನ್ನಾಡಿದರು.
ಕಾರ್ಯಕ್ರಮದ ಸರ್ವಾಧ್ಯಕ್ಷರಾದ ಕರ್ನಾಟಕ ಕೊಂಕಣಿ ಅಕಾಡೆಮಿಯ ಅಧ್ಯಕ್ಷÀ ರವೀಂದ್ರನಾಥ ಪಿ. ನಾಯ್ಕ ಮಾತನ್ನಾಡಿ “ಕೊಂಕಣಿ ಭಾಷೆಯ ಅಭಿವೃದ್ಧಿ – ಕೊಂಕಣಿ ಜನಪದದ ಸಂಗ್ರಹ ಮತ್ತು ಶಾಲೆಯಲ್ಲಿ ಕೊಂಕಣಿ ಭಾಷೆಯ ಅಧ್ಯಯನ ನಡೆಸುವವರಿಗಾಗಿ ಸಹಾಯ ಮಾಡುವ ಕೆಲಸವನ್ನು ಅಕಾಡೆಮಿ ಮಾಡುತ್ತಿದೆ. ಕೊಂಕಣಿ ಭಾಷೆ ಆಡುವ ಎಲ್ಲಾ ಪಂಗಡದವರಿಗಾಗಿ ಅಕಾಡೆಮಿ ಇದೆ. ಅವರ ಅಭಿವೃದ್ಧಿಗಾಗಿ ಅಕಾಡೆಮಿಯ ಯೋಜನೆಗಳನ್ನು ರೂಪಿಸಿ ಕೆಲಸ ಮಾಡುತ್ತಿದೆ. ಕೊಂಕಣಿ ಭಾಷೆಗಾಗಿ ಗೇರಸೊಪ್ಪಾದಲ್ಲಿ ನಡೆಯುತ್ತಿರುವ ಈ ಕೆಲಸಗಾರ ಶ್ಲಾಘನೀಯ” ಎಂದರು.
ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷೆ ಅನ್ನಪೂರ್ಣ ಎಸ್. ಶಾಸ್ತ್ರಿ ಉಪಾಧ್ಯಕ್ಷರಾದ ಉದಯ ಬಾಬು ನಾಯ್ಕ ಗ್ರಾಮ ಪಂಚಾಯತ್ ಸದಸ್ಯ ರಾಘವೇಂದ್ರ ನಾಯ್ಕ, ಸರಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ನಾಗರಾಜ ಈಶ್ವರ ನಾಯ್ಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯ ಎಂ. ಸ್ಟಿಫನ್ ಎ ರೊಡ್ರಗೀಸ್ ಮಾತನಾಡಿದರು.
ರಾಮಾ ಮೇಸ್ತ, ಶಿರೂರು, ಉಲ್ಲಾಸ ಪ್ರಭು ಕಾರವಾರ ರಿಜಿಸ್ಟಾರ ಬಿ. ದೇವಿದಾಸ ಪೈ ಸಾಹಿತಿಗಳಾದ ಡಾ.ಸುವರ್ಣಾ ಗಾಡ್, ವಿಶ್ವನಾಥ ಶೇಟ್ . ಆಮ್ಚಿ ಕೊಂಕಣಿಯ ಪ್ರದೀಪ ಆರ್. ನಾಯ್ಕ, ದೇವೆಂದ್ರ ಪಿ. ಮೇಸ್ತ, ಹರೀಶ್ ಎಸ್ ಬಂಟ ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ನಾರಾಯಣ ಮಂಜ ಮರಾಠಿ ಹಾಡಗೇರಿ, ಆರೋಗ್ಯ ಮಾತಾ ಗುಂಡಬಾಳಾದ ತಂಡಗಳಿಂದ ಜನಪದ ನೃತ್ಯ ಪ್ರದರ್ಶಿಸಲಾಯಿತು.
್ಲ ಡಾ. ಸುರೇಶ್ ತಾಂಡೇಲ್ ಸ್ವಾಗತಿಸಿದರು. ಪ್ರದೀಪ ನಾಯ್ಕ ವಂದಿಸಿದರು. ಜೆಕೋಬ ಫರ್ನಾಂಡೀಸ್ ಕಾಸರಕೋಡ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಾಗಾರದಲ್ಲಿ ಡಾ. ಸುವರ್ಣಾ ಗಾಡ್ ಕೊಂಕಣಿ ಗದ್ಯ ರಚನೆಯ ಕುರಿತು, ವಿಶ್ವನಾಥ ಶೇಟ್ ಕೊಂಕಣಿ ಕಾವ್ಯದ ಕುರಿತು ಮತ್ತು ಸುರೇಶ ತಾಂಡೇಲ್ ಕೊಂಕಣಿ ಭಾಷಾ ಚರಿತ್ರೆಯ ಕುರಿತು ಮಾತನ್ನಾಡಿದರು.
ಆಮ್ಚಿ ಕೊಂಕಣಿ ಸಂಘಟನೆಯು ಬಾಬ್ ಎರಿಕ್ ಒಝಾರಿಯೋ ಕೊಂಕಣಿ ಪುಸ್ತಕ ಸಂಗ್ರಹಾಲಯಕ್ಕೆ ನೀಡಿದ ಕಪಾಟು ಹಾಗೂ ಅಕಾಡೆಮಿ ನೀಡಿದ ಸುಮಾರು 2000/- ರೂ. ಮೌಲ್ಯದ ಪುಸ್ತಕಗಳನ್ನು ಅಕಾಡೆಮಿಯ ಅಧ್ಯಕ್ಷರು ಹಾಗೂ ಆಮ್ಚಿ ಕೊಂಕಣಿ ಸಂಘಟನೆಯ ಪದಾಧಿಕಾರಿಗಳು ಶಾಲೆಯ ಮುಖ್ಯಸ್ಥರಿಗೆ ಹಸ್ತಾಂತರಿಸಿದರು.
Leave a Comment