ಗೋಕರ್ಣ:
ಕಳೆದ 10 ವರ್ಷಗಳಿಂದ ಸ್ಥಗಿತಗೊಂಡಿದ್ದ ಬಂಕಿಕೊಡ್ಲದಿಂದ ಹುಬ್ಬಳ್ಳಿಗೆ ತೆರಳುವ ಬಸ್ ಸಂಚಾರ ಪುನರಾರಂಭವಾಗಿದೆ.
ಸೋಮವಾರ ಅಥಣಿ-ಬಂಕಿಕೊಡ್ಲ ಮಾರ್ಗದ ಬಸ್ ಸಂಚಾರ ಆರಂಭವಾಗಿದ್ದರಿಂದ ಸ್ಥಳೀಯ ಬಂಕನಾಥೇಶ್ವರ ದೇವಾಲಯ ಆವರಣದಲ್ಲಿ ಪೂಜೆ ನಡೆಸಿ ಸಿಹಿ ಹಂಚಿ ಸಂಭ್ರಮಿಸಿದರು. ಈ ಬಸ್ ಬೆಳಗ್ಗೆ 5.30ಕ್ಕೆ ಗೋಕರ್ಣದಿಂದ ಹೊರಡಲಿದೆ. ರಾತ್ರಿ 8.30ಕ್ಕೆ ಅಥಣಿ ತಲುಪಲಿದೆ. ಪ್ರಯಾಣಿಕರ ಸಮಸ್ಯೆ ಅರಿತು ಬಸ್ ಪುನರಾರಂಭ ಮಾಡಿದ ಕೆ.ಎಸ್.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕ ಪಾಂಡುರಂಗ ನಾಯಕರ ಕಾಳಜಿಗೆ ಬಿಜೆಪಿ ಯವ ಮುಖಂಡ ಮಂಜುನಾಥ ಜನ್ನು, ಸ್ಥಳೀಯ ದುರಿಣ ಚಂದ್ರಕಾಂತ ಶೆಟ್ಟಿ, ಅಮಿತ್ ನಾಡಕರ್ಣಿ, ದೇವಾನಂದ ಗೌಡ, ಮಾರುತಿ ನಾಯ್ಕ, ನಾಗರಾಜ ಶೆಟ್ಟಿ ಹಾಗೂ ಸ್ಥಳೀಯ ಜನ ಮೆಚ್ಚುಗೆ ವ್ಯಕ್ತಪಡಿಸಿದರು.
Leave a Comment