ಕಾರವಾರ: ರಾಜ್ಯ ಸರ್ಕಾರದ ತೆರಿಗೆ ವಂಚಿಸಿ ಗೋವಾದಿಂದ ಅಕ್ರಮವಾಗಿ ಸರಾಯಿ ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು ಲಕ್ಷಾಂತರ ರೂ ಮದ್ಯದ ಜೊತೆ ವ್ಯಕ್ತಿಯೊರ್ವನನ್ನು ಅಮದಳ್ಳಿ ಬಳಿ ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳಿಗೆ ಕಾರಿನಲ್ಲಿ 18 ಬಾಕ್ಸಗಳಲ್ಲಿ ಸಾಗಿಸುತ್ತಿದ್ದ 500 ಮದ್ಯದ ಬಾಟಲಿಗಳು ಸಿಕ್ಕಿದೆ. ಗೋವಾ ನೊಂದಣಿಯ ಕಾರ್ನಲ್ಲಿ ರಾಜೇಶ್ ದಾಮೋದರ ಸ್ಪೂರ್ತಿ ಎಂಬಾತರು ಸರಾಯಿ ಸಾಗಾಟ ಮಾಡುತ್ತಿದ್ದರು. ಆರೋಪಿ ಶಿರವಾಡ ಮೂಲದವರಾಗಿದ್ದು, ವಾಹನ ಚಾಲಕ ಪುಟ್ಟು ಎಂಬಾತ ತಲೆಮರೆಸಿಕೊಂಡಿದ್ದಾನೆ. ಅಬಕಾರಿ ನಿರೀಕ್ಷಕ ಮಂಜುನಾಥ ಅರೆಗುಳಿ ತಂಡದವರು ಅಕ್ರಮವನ್ನು ಬಯಲಿಗೆಳೆದಿದ್ದಾರೆ.
Leave a Comment