ಹೊನ್ನಾವರ:
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಕಾರ್ಯದರ್ಶಿ ಎಸ್.ಕೆ. ಭಾಗ್ವತ್ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಅಂತಿಮ ದರ್ಶನವನ್ನು ಪಡೆದರು. ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಯಕ್ಷಲೋಕದಿಂದ ಮಹಾನ್ ತಾರೆಯೊಂದು ಜಾರಿದಂತಾಗಿದೆ. ಚಿಟ್ಟಾಣಿಯವರು ನಿರ್ವಹಿಸಿದ ವೈವಿಧ್ಯಮಯ ಪಾತ್ರದಿಂದಾಗಿ ಯಕ್ಷಲೋಕದಲ್ಲಿ ಚಿಟ್ಟಾಣಿ ಹೆಸರು ಎಂದೆಂದಿಗೂ ಶಾಶ್ವತವಾಗಿ ಇರಲಿದೆ. ಚಿಟ್ಟಾಣೆಯವರ ಕಲಾದರ್ಶವನ್ನು ಯುವ ಪ್ರತಿಭೆಗಳು ಅಳವಡಿಸಿಕೊಳ್ಳಲಿ ಎಂದು ಭೀಮಣ್ಣ ನಾಯ್ಕ ನುಡಿದರು.
Leave a Comment