ಕಾರವಾರ: ಹೊನ್ನಾವರದ ಹೊಸ ಪಟ್ಟಣದಲ್ಲಿರುವ ಚಂದ್ರಹಾಸ ಗೌಡ ಕಳೆದ 12 ವರ್ಷಗಳಿಂದ ಯಕ್ಷಗಾನ ರಂಗದಲ್ಲಿದ್ದಾರೆ. ಈ ಬಾರೀ ಅವರು ಮಕ್ಕಳಿಗೆ ಉಚಿತ ಯಕ್ಷಗಾನ ತರಭೇತಿ ಶುರು ಮಾಡಿದ್ದಾರೆ.
ಪ್ರಸ್ತುತ ಸಾಲಿಗ್ರಾಮ ಮೇಳದಲ್ಲಿ ಸೇವೆ ಸಲ್ಲಿಸುತ್ತಿರುವ ಚಂದ್ರಹಾಸ ಗೌಡ ತಮ್ಮ ಸ್ನೇಹಿತರಾದ ಶೇಖರ ಗೌಡ, ನಾರಾಯಣ ಗೌಡ, ವಿನೋದ ಗೌಡ, ಧರ್ಮ ಗೌಡ, ಮಹಾಬಳೇಶ್ವರ ಗೌಡ ಸೇರಿದಂತೆ ಹಲವರ ಸಹಕಾರದೊಂದಿಗೆ ಶಾಲಾ ಮಕ್ಕಳಿಗೆ ಯಕ್ಷಗಾನ ತರಬೇತಿ ಶಾಲೆಯನ್ನು ಆರಂಭಿಸಿದ್ದಾರೆ. ಪ್ರಾರಂಭದ ದಿನವೇ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಮೊದಲು 30 ಮಕ್ಕಳು ದಾಖಲಾಗಿದ್ದರು. ಮರುದಿನ ಈ ಸಂಖ್ಯೆ 60ಕ್ಕೆ ಏರಿಕೆ ಕಂಡಿತ್ತು. ಮೂರನೇ ದಿನ ಇನ್ನೂ 10 ಮಕ್ಕಳು ದಾಖಲಾತಿಯನ್ನು ಪಡೆದು ಕೊಂಡಿದ್ದು ಒಟ್ಟೂ 70 ಮಕ್ಕಳಿಗೆ ಕಲಿಕೆ ನಡೆಯುತ್ತಿದೆ.
ಯಕ್ಷಗಾನದಿಂದ ಕಲಿಯಬೇಕಾಗಿರುವ ವಿಷಯಗಳು ತುಂಬಾ ಇವೆ. ಇಂತಹ ಕಲೆಯನ್ನು ಮುಂದಿನ ಪೀಳಿಗೆಯವರೂ ಮೂದುವರೆಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಜಿಲ್ಲೆಯ ಎಲ್ಲ ಭಾಗಗಳಲ್ಲಿಯೂ ಕೂಡ ಇಂತಹ ತರಬೇತಿ ಶಾಲೆಗಳು ಆರಂಭಿಸಬೇಕು. ಕಲಾಸಕ್ತರಿಗೆ ಪ್ರೋತ್ಸಾಹ ನೀಡಬೇಕು. ಓರ್ವ ಯಕ್ಷಗಾನ ಕಲಾವಿದನಾಗಿ ತಾನು ಸಂಸ್ಕøತಿಯನ್ನು ಬೆಳಡಸುವ ಉದ್ದೇಶದಿಂದ ಇಲ್ಲಿ ತರಬೇತಿ ಶಾಲೆಯನ್ನು ಪ್ರಾರಂಭಿಸಿದ್ದು ತನ್ನ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ವ್ಯಕ್ತವಾಗಿರುವುದು ತುಂಬಾ ಖುಷಿ ಕೊಟ್ಟಿದೆ ಎಂದು ಚಂದ್ರಹಾಸ ಗೌಡ ಅಭಿಪ್ರಾಯ ಹಂಚಿಕೊಂಡರು.
ಯಕ್ಷಗಾನ ತರಬೇತಿಯಲ್ಲಿ ದಾಖಲಾಗಿರುವ ಮಕ್ಕಳಲ್ಲಿ ವಿದ್ಯಾರ್ಥಿನಿಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎಲ್ಲರಿಗೂ ಕೂಡ ಅವರ ಶಾಲಾ ವಿಷಯಕ್ಕೆ ಅನುಕೂಲವಾಗುವಂತೆ ಪಟ್ಟಿ ಹಾಗೂ ಪೆನ್ನುಗಳನ್ನು ವಿತರಿಸಲಾಗಿದೆ. ನೃತ್ಯ, ಅರ್ಥಗಾರಿಕೆ, ವಾದನ, ವೇಷ ಭೂಷಣ ಸೇರಿದಂತೆ ಯಕ್ಷಗಾನದ ಹಾವಭಾವಗಳನ್ನು ಇಲ್ಲಿ ಕಲಿಸಲಾಗುತತದೆ. 4 ರಿಂದ 6 ತಿಂಗಳ ವರೆಗೆ ತರಬೇತಿ ಇದಾಗಿದೆ.
Leave a Comment