ಕಾರವಾರ: ಭೂಮಿಯಲ್ಲಿ ಕಾಡುಜೀವಿಗಳಿಗೂ ವಾಸಿಸುವ ಹಕ್ಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಶಿವಕುಮಾರ ಹೇಳಿದರು.
ಕಾರವಾರ ಅರಣ್ಯ ವಿಭಾಗದಲ್ಲಿ 63ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾನವನ ರಕ್ಷಣೆಗೆ ಕಾನೂನಿದೆ. ಮಾನವ ಹಕ್ಕುಗಳು ಎಂಬ ನಿಯಮವಿದೆ. ಅದರಂತೆ ವನ್ಯಜೀವಿಗಳ ರಕ್ಷಣೆಗೂ ಕಾನೂನುಗಳಿದ್ದು ಅದನ್ನು ಮಾನವ ಗೌರವಿಸಬೇಕಿದೆ ಎಂದು ಹೇಳಿದರು. ವನ್ಯಜೀವಿಗಳ ವಿನಾಶ ಮಾನವ ಸಂಕುಲಕ್ಕೆ ಶಾಪವಾಗಲಿದೆ ಎಂಬುದನ್ನು ಅರಿಯಬೇಕು. ಪರಿಸರ ಸಮತೋಲನ ಕಾಪಾಡುವ ಕಾಡನ್ನು ರಕ್ಷಿಸುವದು ಎಲ್ಲರ ಜವಾಬ್ದಾರಿ ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಟಿ. ಗೋವಿಂದಯ್ಯ ಮಾತನಾಡಿ, ಮನುಷ್ಯನಿಗೆ ಗಾಳಿ, ನೀರು ಅವಷ್ಯಕತೆಯಿದ್ದಲ್ಲಿ ವನ್ಯ ಸಂಪತ್ತು ಉಳಿಸುವದು ಅನಿವಾರ್ಯ ಎಂದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ. ಗಣಪತಿ ಅಧ್ಯಕ್ಷತೆ ವಹಿಸಿದ್ದರು. ಅಧಿಕಾರಿಗಳಾದ ಗೋವಿಂದ ನಾಯ್ಕ, ಟಿ ಪ್ರಸನ್ನ ಪಟಗಾರ, ವಸಂತ ರೆಡ್ಡಿ ವೇದಿಕೆಯಲ್ಲಿದ್ದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ.ಕೆ. ಪೈಳು ಪ್ರಸ್ಥಾಪಿಸಿದರು. ಮಂಜುನಾಥ್ ನಾವಿ ಸ್ವಾಗತಿಸಿದರು. ವಿರೇಂದ್ರ ಪವಾರ ನಿರ್ವಹಿಸಿದರು. ಜಿ.ವಿ. ನಾಯ್ಕ ವಂದಿಸಿದರು.
Leave a Comment