ಹೊನ್ನಾವರ:
ಪಟ್ಟಣದ ಪ್ರಮಿಳಾ ಬಾರ್ ಎಂಡ್ ರೆಸ್ಟೋರೆಂಟ್ನಲ್ಲಿ ಗುರುವಾರ ಗ್ರಾಹಕನೊಬ್ಬ ಮಾರಣಾಂತಿಕವಾಗಿ ಗಾಯಗೊಂಡು ಮೃತಪಟ್ಟಿದ್ದು, ಈತನನ್ನು ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂಬ ಸಂಶಯ ವ್ಯಕ್ತವಾಗಿದೆ.
ಅಂಕೋಲಾ ತಾಲೂಕಿನ ಮೊಗಟಾದ ಮಂಜುನಾಥ ಚಂದ್ರ ನಾಯಕ (40) ಮೃತ ವ್ಯಕ್ತಿ. ಈತ ಶಿರಸಿಯಲ್ಲಿ ಕೆಎಸ್ಆರ್ಟಿಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದು ಅ. 4 ರಂದು ಬುಧವಾರ ಹೊನ್ನಾವರ ಪ್ರಭಾತನಗರದಲ್ಲಿ ತನ್ನ ಕುಟುಂಬದೊಂದಿಗೆ ವಾಸವಾಗಿರುವ ಬಾಡಿಗೆ ಮನೆಗೆ ಬಂದಿದ್ದನು. ಗುರುವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಪಟ್ಟಣದ ಬೆಂಗಳೂರು ಸರ್ಕಲ್ನಲ್ಲಿರುವ ಪ್ರಮಿಳಾ ಬಾರ್ ಏಂಡ್ ರೆಸ್ಟೋರೆಂಟ್ಗೆ ಹೊಗಿದ್ದಾಗ ಈತನ ತಲೆ ಮತ್ತು ಎದೆಗೆ ಬಲವಾಗಿ ಗಾಯಗೊಳಿಸಲಾಗಿದೆ. ಗಾಯಗೊಂಡು ಬಿದ್ದಿರುವ ಈತನನ್ನು ಚಿಕಿತ್ಸೆಗಾಗಿ ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾನೆ.
ಈತನ್ನು ಬಾರಿನವರು ಹೊಡೆದು ಕೊಲೆ ಮಾಡಿದ್ದಾರೆ ಎಂದು ಮೃತನ ಪತ್ನಿ ಹೊನ್ನಾವರ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಹೆಂಡತಿ ದೂರಿದ್ದೇನು?
ತನ್ನ ಗಂಡ ಮಂಜುನಾಥ ಇವರು ಕಳೆದ ಐದು ತಿಂಗಳಿಂದ ಶಿರಸಿ ಕೆ.ಎಸ್.ಆರ್.ಟಿ.ಸಿ ಡಿಪೋದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಾರೆ. ಅವರು ಹೊನ್ನಾವರದಲ್ಲಿನ ಮನೆಗೆ ಬಂದ ವೇಳೆ ಬಿಡುವಿನ ಸಮಯದಲ್ಲಿ ಹೊರಗೆ ಹೋಗುತ್ತಿದ್ದರು. ಅ.4 ರಂದು ರಾತ್ರಿ ಅವರು ಮನೆಗೆ ಬಂದಿದ್ದು, ಎಂದಿನಂತೆ ಇದ್ದರು.
ಅ.5 ರಂದು ಬೆಳಿಗ್ಗೆ ನಾನು ನನ್ನ ಸ್ವಂತದ ಕೆಲಸಕ್ಕಾಗಿ ಕಾರವಾರಕ್ಕೆ ಹೋಗಲಿರುವದಾಗಿ ಮನೆಯಲ್ಲಿದ್ದ ಗಂಡನಿಗೆ ತಿಳಿಸಿ ಹೋಗಿದ್ದೆ. ನಾನು ಕಾರವಾರದಲ್ಲಿದ್ದ ವೇಳೆ ಸುಮಾರು 11.30 ರ ಸಮಯಕ್ಕೆ ನಾನು ಕೆಲಸ ಮಾಡುತ್ತಿದ್ದ ಖಾಸಗಿ ಆಸ್ಪತ್ರೆ ಸಿಬ್ಬಂದಿಯೊರ್ವರು ಫೋನ್ ಕರೆಮಾಡಿ, ನಿಮ್ಮ ಗಂಡ ಗಾಯಗೊಂಡು ಎಬುಲೆನ್ಸ್ನಲ್ಲಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದರು. ನಂತರ ನನ್ನ ಸಂಬಂಧಿಕರಿಗೆ ವಿಷಯ ತಿಳಿಸಿದ್ದೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ನಾನು ಆಸ್ಪತ್ರೆಗೆ ಬಂದು ನೋಡಿದಾಗ ಗಂಡ ಮೃತಪಟ್ಟಿದ್ದರು. ಅವರ ತಲೆಯ ಹಿಂಭಾಗಕ್ಕೆ ಬಲವಾದ ಏಟಿನ ಗಾಯವಾಗಿ ರಕ್ತ ಸೋರುತ್ತಿತ್ತು. ಎದೆಯ ಎಡಭಾಗದಲ್ಲಿ ಗಾಯವಾಗಿ ರಕ್ತ ಬಂದಿತ್ತು.ಅವರ ದೇಹದ ಮೇಲೆ ಲಾದ ಮಾರಣಾಂತಿಕ ಏಟುಗಳಿರುವದರಿಂದ ಅವರ ಸಾವಿನ ಬಗ್ಗೆ ಶಂಕೆ ಇದ್ದು .ವ್ಯನ್ಶಾಫ್ ಮಾಲೀಕರು ಹಾಗೂಸಂಬಂಧಿಸಿದವರುಈ ಕೊಲೆಗ್ಯೆದಿರುವದಾಗಿ ಅನುಮಾನವಿದ್ದು ಈಬಗ್ಗೆ ಸಮಗ್ರ ತನಿಖೆ ನಡೆಸಿ ನ್ನಾಯನೀಡುವಂತೆ ಅವರು ಸಲ್ಲಿಸಿದ ದೂರಿನಲ್ಲಿ ಕೋರಿದ್ದಾರೆ
Leave a Comment