ಹೊನ್ನಾವರ ;
ಸಿಲೆಕ್ಟ್ ಫೌಂಡೇಶನ್ (ರಿ.) ಹಾಗೂ ಶ್ರೀ ವೀರಾಂಜನೇಯ ಯಕ್ಷಮಿತ್ರಮಂಡಳಿ (ರಿ) ಬಂಗಾರಮಕ್ಕಿ. ಇವರ ಸಹಯೋಗದಲ್ಲಿ ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿನಡೆದ ಯಕ್ಷಪೂರ್ಣಿಮೆಯ ಸಮಾರೋಪ ಸಮಾರಂಭದಲ್ಲಿ ಹಿರಿಯ ಸ್ತ್ರೀ ವೇಷಧಾರಿಯಾದ ಶಿರಳಗಿಯ ಭಾಸ್ಕರ ಜೋಶಿಅವರಿಗೆ ಯಕ್ಷಾಂಜನೇಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಭಾಸ್ಕರ ಜೋಶಿ ಮಾತನಾಡ್ತಿ ತಮ್ಮ ಯಕ್ಷಗಾನ ಜೀವನದಲ್ಲಿ ದಿವಂಗತ ಚಿಟ್ಟಾಣಿ ರಾಮಚಂದ್ರ ಹೆಗಡೆಯವರಂತಹ ಅದ್ಭುತ ಕಲಾವಿದರ ಒಡನಾಟವು ಆಗಿರುವುದು ಅದೃಷ್ಟವೇ ಸರಿ ಎನ್ನುತ್ತಾ ತಮ್ಮ ಯಕ್ಷಗಾನ ಜೀವನದ ಅನುಭವಗಳನ್ನು ಹಂಚಿಕೊಡರು.
ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ, “ಯಕ್ಷ ರಕ್ಷೆ” ಮುರುಡೇಶ್ವರದ ಅಧ್ಯಕ್ಷರಾದ ಡಾ|| ಆಯ್. ಆರ್. ಭಟ್ ಹಾಗೂ , ನಗರಬಸ್ತಿಕೇರಿ ಗ್ರಾಮ ಪಂಚಾಯತದ ಮಾಜಿ ಅಧ್ಯಕ್ಷರಾದ ಗೋವಿಂದ ಎಸ್. ನಾಯ್ಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಯಕ್ಷಗಾನ ಸಂಶೋಧನಾ ಕೇಂದ್ರ ಕುಮಟಾದ ನಿರ್ದೇಶಕರಾದ ಡಾ|| ಜಿ.ಎಲ್. ಹೆಗಡೆ ಮಾತನಾಡಿ ಇಂದಿನ ದಿನಗಳಲ್ಲಿ ನಾಲ್ಕು ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ, ಮೋಕ್ಷಗಳಲ್ಲಿ ಧರ್ಮ ಮತ್ತು ಮೋಕ್ಷವನ್ನು ಮರೆತು ಕೇವಲ ಅರ್ಥ ಮತ್ತು ಕಾಮದೆಡೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಯಕ್ಷಗಾನ ನಮ್ಮ ಜಿಲ್ಲೆಯದು, ಅದಕ್ಕೆ ಬೇಕಾದಷ್ಟು ಆಧಾರಗಳಿವೆ, ಇದು ನಮ್ಮ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಯಕ್ಷಗಾನದ ಮುಖಾಂತರ ಕನ್ನಡ ಭಾಷೆಯು ಉಳಿಯುತ್ತದೆ. ಯಕ್ಷಗಾನ ಮುಂದಿನ ದಿನಗಳಲ್ಲಿ ಉಳಿಯಬೇಕು, ಅದಕ್ಕೆ ಕಲಾವಿದರೂ ಕೂಡಾ ಸಹಕರಿಸಬೇಕು ಎಂದರು.
Leave a Comment