ಕಾರವಾರ:
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಅಕ್ಟೋಬರ 26 ರಿಂದ 29 ವರೆಗೆ ನಾಲ್ಕು ದಿನಗಳ ಕಥಕ್ ನೃತ್ಯ ಕಾರ್ಯಗಾರ ಶಿಬಿರವನ್ನು ಧಾರವಾಡದ ಸಾಧನಕೇರಿಯ ಬೇಂದ್ರೆ ಭವನದಲ್ಲಿ ನಿರುಪಮಾ ರಾಜೇಂದ್ರ ಅವರ ಸಂಚಾಲಕತ್ವದಲ್ಲಿ ಹಮ್ಮಿಕೊಂಡಿದೆ.
ಶಿಬಿರವನ್ನು ಎರಡು ಹಂತದಲ್ಲಿ ನಡೆಸಲಾಗುವದು. ಶಿಬಿರದಲ್ಲಿ ಭಾಗವಹಿಸಲಿಚ್ಚಿಸುವಂತಹ ಆಸಕ್ತರು ಸ್ವವಿವರಗಳೊಂದಿಗೆ ಅಕ್ಟೋಬರ್ 10 ರೊಳಗಾಗಿ ರಿಜಿಸ್ಟಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ 2ನೇ ಮಹಡಿ ಜೆ.ಪಿ.ರಸ್ತೆ ಬೆಂಗಳೂರು-2 ಇಲ್ಲಿಗೆ ಕಳುಹಿಸಿ ಕೊಡಬೇಕು. ಹೆಚ್ಚಿನ ವಿವರಗಳಿಗಾಗಿ ದೂರವಾಣಿ 080-22215072 ಸಂಪರ್ಕಿಸಬಹುದು. ಶಿಬಿರಾರ್ಥಿಗಳನ್ನು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವದು ಎಂದು ಅಕಾಡೆಮಿ ರಿಜೀಸ್ಟಾರ್ ಬನಶಂಕರಿ ವಿ .ಅಂಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment